ವಿಜಯದಶಮಿ
ನವರಾತ್ರಿ ಇಂದು ಸಮಾಪ್ತಿಗೊಂಡು
ಬಂದಿತು ವಿಜಯದಶಮಿ
ನವಶಕ್ತಿ ರೂಪಿಣಿ ನವದುರ್ಗೆಯರ
ನಮಿಸುವ ಎಲ್ಲರು ಬನ್ನಿ
ಬನ್ನಿ ಮಹಾಕಾಳಿಯ ಭಕ್ತಿಯಿಂದಲಿ
ಪೂಜಿಸಿ ಬನ್ನಿಯ ಮುಡಿವ
ಹೊನ್ನ ಸಮಾನವು ಈ ದಿನ ಬನ್ನಿಯು
ಹಂಚುತ ಹರುಷವ ಪಡೆವ
ದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ
ಎನ್ನುವ ಮಾತು ಸತ್ಯ
ಮಿತ್ಯದ ಮೇಲೆ ಸತ್ಯದ ಗೆಲುವಿನ
ಸಂಕೇತವೇ ಈ ಹಬ್ಬ
ನಾಡಿನ ಸಮಸ್ತ ಬಾಂಧವರಿಗೆಲ್ಲ
ವಿಜಯದಶಮಿ ಶುಭಾಶಯ
ಬೇಡುವ ಚಾಮುಂಡೇಶ್ವರಿ ತಾಯಿಗೆ
ಶಾಂತಿ ಸುಭೀಷ್ಟತೆ ಅಭಯ.
ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು