ಕವನ : ಭೀಕರ ಭೂಕಂಪ

Must Read

ಭೀಕರ ಭೂಕಂಪ

ಏನು ದೈವವಿದು
ನಾವು ಬೆರೆತುಕೊಂಡು
ಹಲವು ದಶಕ
ಬದುಕು ಸಾಗಿಸುತ್ತಿರುವಾಗ
ಇಬ್ಬಾಗಿಸುವ ವಿಧಿಯೊಂದು
ಧಿಡೀರನೇ ಬಂದು ನಿಲ್ಲಬೇಕೆ ?
ಬಾಳ ಪಯಣದಲಿ
ಎಂದೂ ಕಂಡರಿಯದ
ಭೀಕರ ಭೂಕಂಪ !
ಭೂಮಿ ಬಿರಿಯಿತು
ಮೋಡ ನೆಲ ಕಚ್ಚಿತು
ಕೆಂಡದ ಮಳೆ
ಮೌನದಲಿ ಸೂರ್ಯ
ಕಣ್ಣು ಮುಚ್ಚಿದ
ದಿಕ್ಕೆಟ್ಟು ನಿಂತೆವು
ಗೂಡು ತೊರೆದು
ಸಿಹಿ ಸಂಸಾರದ
ಜೋಡು ಹಕ್ಕಿ
ಪುಟ್ಟ ಮರಿ ಅಗಲಿದವು
ಸಾವು ನೋವಿನಲ್ಲಿ
ಅಳಿದುಳಿದವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಶಿವಶಂಕರನಿಗೆ
ಭಾವ ನಮನ
ಬದುಕು ನೂಕುವುದು
ಅವನ ನೆನಪಿನಲಿ
ಅವನ ನೆನಹಿನಲಿ

_________________________

ಡಾ.ದಾಕ್ಷಾಯಿಣಿ ಮಂಡಿ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group