ಕವನ : ಭದ್ರ ಬದುಕು

Must Read

ಭದ್ರ ಬದುಕು

ನಾನು ನೀನು ನಿತ್ಯ
ಹೀಗೆ ನೆನಪಲಿ
ದಿನವ ನೂಕುತ್ತಿದ್ದೇವೆ
ನಗೆ ಸಂತಸ ಸಂಭ್ರಮ
ಕನಸು ಕವನ ಕಾವ್ಯ
ಭಾವ ಪ್ರೀತಿ ಒಲವು
ಹಂಚಿಕೊಂಡು

ನೀನು ನಾನು
ಪ್ರೀತಿಸಿದ್ದಂತೂ ನಿಜ
ಆದರೆ ಪ್ರೀತಿಗೆ
ಕಾರಣ ಏನು
ಎನ್ನುವ ಪ್ರಶ್ನೆಗೆ
ಉತ್ತರ ಮೌನ
ನಾವು ಕುರುಡು ಜಾಣ

ಹುಡುಕಾಟಕೆ ಸೋಲಿಲ್ಲ
ಹೃದಯ ಭಾಷೆಗೆ
ನೆಮ್ಮದಿಯ ಗೆಲುವು
ತಳಮಳ ನೋವು
ಶಮನಿಸುವ ಯತ್ನ
ಕಟ್ಟುವುದು ಗಟ್ಟಿ
ಭದ್ರ ಬದುಕು

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group