ಒಂದು ಪರಿಸರ ಗೀತೆ : ಮರ ದೇವರು ಕೊಟ್ಟ ವರ

Must Read

ಮರ ದೇವರು ಕೊಟ್ಟ ವರ

ಬಹು ಉಪಯೋಗಿ ಮರ
ದೇವರು ಕೊಟ್ಟ ವರ
ರಕ್ಷಿಪುದು ಪರಿಸರ
ನೀಗುವದು ಬರ

ತರಲು ಮಳೆ ನೀರ
ತಡೆಯಲು ಮಹಾಪೂರ
ಹಿಡಿದಿಡಲು ಭೂಸಾರ
ಬೇಕು ನಮಗೆ ಮರ

ಮರಮುಟ್ಟು ಔಷಧ
ಬೆಳೆಗಳಿಗೆ ಗೊಬ್ಬರ
ಕಟ್ಟಲು ಮನೆ ಮಂದಿರ
ಬೇಕು ನಮಗೆ ಮರ

ಹಸಿರು ಹೊನ್ನಿದು ಮರ
ಭೂ ತಾಯಿಗೆ ಅಲಂಕಾರ
ಪಶು ಪಕ್ಷಿಗೆ ಆಹಾರ
ರೈತ ಜನಕೆ ಆಸರ

ಸುಜನರೆ ಕೇಳಿರಿ
ಮರಗಳನು ಬೆಳೆಸಿರಿ
ಕಾಡನು ಉಳಿಸಿರಿ
ಪರಿಸರ ರಕ್ಷಿಸಿರಿ

… ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group