ಕವನ : ಉಸಿರಾದವರು

Must Read

 ಉಸಿರಾದರು

ಮಕ್ಕಳಿಲ್ಲೆಂಬ ಕೂರಗಿನಿಂದ ನೊಂದರು
ಬೇಸತ್ತ ಗಂಡ ಹೆಂಡತಿ ಇಬ್ಬರು
ರಸ್ತೆಬದಿಯಲ್ಲಿ ಗುಂಡಿ ತೋಡಿದರು
ಗಿಡ ನೆಟ್ಟು ನೀರುಣಿಸಿದರು

ಗಿಡ ಬೆಳೆದು ಮರವಾಗುವುದ ಕಂಡರು
ಅವುಗಳನ್ನೇ ಮಕ್ಕಳೆಂದು ನಂಬಿದರು
ಸಂತೋಷದಿ ಕಾಯಕ ಮುಂದುವರಿಸಿದರು
ಎಂಟು ಸಾವಿರ ಮರಗಳ ಬೆಳೆಸಿದರು

ನಾಡಿಗೇ ಹಸಿರಿನಿಂದ ಉಸಿರಾದರು
ಸಾಲುಮರದ ತಿಮ್ಮಕ್ಕ ನೆಂದು ಬಿರುದು ಪಡೆದರು
ವೃಕ್ಷಮಾತೆ ಎಂದು ಹೆಸರಾದರು
ಸಾವಿರಾರು ಪ್ರಾಣಿ ಪಕ್ಷಿಗಳಿಗೆ ನೆಲೆ ನೀಡಿದರು

ಓದು ಬರಹ ಕಲಿತಿಲ್ಲ ಇವರು
ನಿರ್ಮಲ ಮನಸ್ಸುಳ್ಳವರು
ನಿಸ್ವಾರ್ಥ ಸೇವಾ ಭಾವನೆ ಉಳ್ಳವರು
ಯಾರಿಂದಲೂ ಏನನ್ನು ಬಯಸದವರು

ಈ ನಿಸ್ವಾರ್ಥ ಸೇವೆಗೇ ರಾಷ್ಟ್ರಪತಿಯಿಂದ
ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಪಡೆದವರು
ತಮ್ಮ ಆಸ್ತಿಯನ್ನು ಶಾಲೆಗೇ ಧಾರೆ ಎರೆದವರು
ನೀವು ನೆಟ್ಟ ವೃಕ್ಷಗಳು ನಿಮಗಾಗಿ ಕಾಯುತ್ತಿವೆ
ಮತ್ತೂಮ್ಮೆ ಹುಟ್ಟಿ ಬನ್ನಿ ವೃಕ್ಷಮಾತೆ ನಿಮಗೇ ಕೋಟಿ ಕೋಟಿ ನಮನಗಳು

ಸೌಭಾಗ್ಯ ಅಶೋಕ ಕೊಪ್ಪ, ಗೋಕಾಕ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group