ಕವನ : ದೂರಾದ ಚೆಲುವೆ

Must Read

ದೂರಾದ ಚೆಲುವೆ

ಮನಸಿನಾಳದಲಿ ಬೇರುಬಿಟ್ಟು
ಹೃದಯದಲಿ ಆಸೆಯ ಹಂದರ ಹಚ್ಚಿ
ಕನಸು ಕೈಗೂಡುವ ಮುನ್ನ
ಗಗನ ಕುಸುಮವಾಗಿ
ಚಿತ್ತಚೋರನಿಂದ ದೂರವಾದ ಒಲವೇ
ನಿನ್ನಿನಿಯನ ಬದುಕು ಬೇಡವಾಯಿತೇ?

ಗಾಳಿ ಬೀಸಿದಾಗೊಮ್ಮೆ ನೆನಪು ಉಮ್ಮಳಿಸಿ
ಬಿಕ್ಕುತಿದೆ ಮನ
ಮೋಡ ಕವಿದಾಗೆಲ್ಲಾ ನೆನಪಾಗುತಿದೆ ಮೌನ
ಸಾನ್ನಿಧ್ಯ ಬಯಸಿದೆ
ಹೃದಯ ಹಗುರಾಗಲು
ನಿನ್ನೆಯ ನೆನಪಿಗಿಂತ
ಬಲು ಕಷ್ಟವಿಂದು
ತಾಳಲಾರೆ ವಿರಹ ಕಣ್ಣಂಚಿನಲಿ ಜಾರುತಿದೆ ಬಿಂದು
ಅಂಬರದ ಹೂವಿಗೆ
ಭುವಿಯ ಸ್ಪರ್ಶ ಬೇಡವಾಯಿತೇ?

ತೋಳಬಂದಿಯ ಸಾನ್ನಿಧ್ಯದಲಿ ಲೋಕ ಮರೆಸಿದ್ದೆ
ಕಣ್ಣುಗಳ ನೋಟದಲಿ ಎಲ್ಲಾ ಅರಸಿದ್ದೆ
ಮರಳುಗಾಡಿನಲ್ಲಿ ಅಲೆಯುತ್ತಿದ್ದರೂ
ಓಯಸಿಸ್ ಆಗಿದ್ದೆ
ಜೀವದ ಕಣಿಯಾಗಿದ್ದೆ
ಈ…ಗ…ಈ…ಗ… ಈಗ…

✍️✍️ ಶಿವಕುಮಾರ ಕೋಡಿಹಾಳ ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group