ಕವನ : ಮತ್ತೆ ಹುಟ್ಟಿ ಬಂದಿರುವೆ

Must Read

ಮತ್ತೆ ಹುಟ್ಟಿ ಬಂದಿರುವೆ

ಕೊರೆವ ಚಳಿ ಡಿಸೆಂಬರ್ ೨೫ ದಲಿತಸೋಗೆಯ ಬಿಲಗಳಲಿ ವಾಸವಾಗಿರುವ ಜೀಸಸ್ ಹುಟ್ಟಿ ಬಂದಿದ್ದಾನೆ ಮತ್ತೆ
ಪುಟ್ಟ ಹುಡುಗ ಲಾಬೋ
ಮಡಕೆಯಲ್ಲಿ ಹಿಡಿದು ತಂದ
ಗಿಡದ ಟೊಂಗೆ ಹುಟ್ಟು ಹಬ್ಬದ ಸಂಕೇತವಾಯಿತು ಕ್ರಿಸ್ಮಸ್ ಟ್ರೀ
ಗೋಲ್ಗೋಥಾ ಗುಡ್ಡದ ಮೇಲೆ
ತೈಬಿರಿಯಸ್ ಚಕ್ರವರ್ತಿಯ ಆಜ್ಞೆ

ಯಹೂದಿಗಳ ಪ್ರತ್ಯೇಕ ರಾಜ್ಯ
ರೋಮ್ ಸಾಮ್ರಾಜ್ಯದ ವಿರುದ್ಧ ಆರೋಪ
ಹೊಸ ಸಾಮ್ರಾಜ್ಯದ ಬಯಕೆ
ಮುಗ್ಧ ಹೃದಯಕ್ಕೆ ಇಟ್ಟ ಬೆಂಕಿ
ಮುಳ್ಳಿನ ಕಿರೀಟ
ಹಬ್ಬಿಸಿದ ಸುಳ್ಳು
ಬಡಿದ ಮೊಳೆಗಳು
ಬಾಗಿ ನಿಂತು ಕೈ ಮುಗಿದಂತಿದೆ ದೇಹ

ದೇವರೇ ಮನ್ನಿಸು
ಇವರಾರೂ ಅರಿಯರು
ಕರೆದು ಸಮ್ಮಾನಿಸುವ
ದುರುಳ ರಾಜಕೀಯ
ಮನ ಮನೆಯಲ್ಲೂ ನರಳಾಟ
ಅದೆಷ್ಟೋ ಜೀವಗಳು
ನಗೆ ಕಾಣದೇ ಮಲಗಿಕೊಂಡಿವೆ

ಎನ್ನ ತಂದೆ ಜೊಸೆಫ್
ತಾಯಿ ಮೇರಿ ಕಲಿಸಿದ ಪಾಠ
ನನಗಿಂದು ಸಂತಸ ತಂದಿದೆ
ಸುಳ್ಳಿನ ಗೋರಿಯೊಳಗೆ
ಜೀವಂತ ಶವವಾಗಿ ಮಲಗಿದ
ಇವರನ್ನು ಎಚ್ಚರಿಸುವೆ

ಅವಮಾನ ಅಪಚಾರ
ದುಷ್ಟ ಪೈಶಾಚಿಕ ಕೃತ್ಯದ ಪೈಪೋಟಿ
ಅಧಿಕಾರ ಆಮಿಷ
ಲಂಚ ವಂಚನೆಗೆ ಮೋಸ
ಬೆಳಕಿಲ್ಲದ ಮನೆ ಮನೆ ಯಲ್ಲಿ
ದೀಪವಾಗುವೆ

ಬರುವೆ ಇಂದಲ್ಲಾ ನಾಳೆ
ನಿಮ್ಮ ಮನೆ ಮನೆಗೆ
ದಲಿತ ಶೋಷಿತ ಮಿಡಿತ ಭಾವದಲಿ
ಬದುಕು ತೋರುವೆ
ನಗೆ ನಗಾರಿ ಸಿಲುಬೆಯಿಂದೆದ್ದು
ಡೋಲು ಬಾರಿಸುವೆ

ಗಂಟೆ ಜಾಗಟೆಯ ಸದ್ದು
ಗಗನದ ತುಂಬೆಲ್ಲಾ
ಹೂಮಳೆ ಗರೆಯುವೆ
ಕಾಯಬೇಕು ಕರುಣಾಳು ಬೆಳಕಾಗಿ
ಮತ್ತೆ ಬರುವೆ ಮತ್ತೆ ಹುಟ್ಟುವೆ..

ಸಾವಿತ್ರಿ ಕಮಲಾಪೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group