ಸಿದ್ಧಗಂಗೆ ಶಿವಪುರುಷ
ಸಿದ್ಧಗಂಗೆಯ ಶಿವಪುರುಷ
ಲಿಂಗಾಯತರ ಕಾರಣಿಕ
ಗುರು ಲಿಂಗ ಜಂಗಮ ಕೀರ್ತಿ
ನೀವು ನಾಡಿನ ಜ್ಯೋತಿ
ಹಸಿದ ಮಕ್ಕಳಿಗೆ ಜ್ಞಾನ
ಇರಲು ವಸತಿ ಧ್ಯಾನ
ಅನ್ನವನಿಕ್ಕಿ ಬೆಳಗಿದಿರಿ
ಮಾನವನ ಮಾನ
ನೀವಿಟ್ಟ ಹೆಜ್ಜೆ ನೆಲ
ಸುಕ್ಷೇತ್ರ ಕೈಲಾಸ
ಭಕ್ತರ ಮನದೊಳಗೆ
ವಾಸಿಸುವ ಈಶ
ದಿನ ದಿನವೂ ನೆನೆಯುವೆನು
ಶ್ರೀ ಶಿವಕುಮಾರ ವಸುಧೀಶ
ನಿಮ್ಮ ಪಾವನ ಹರಕೆ
ನಮಿಸುವೆನು ಪರಮೇಶ
_________________________
ಡಾ. ಗೀತಾ ದಾನಶೆಟ್ಟಿ ತುಮಕೂರು

