ಕವನ : ಶಿರಸಂಗಿ ಲಿಂಗರಾಜರು

Must Read

ಶಿರಸಂಗಿ ಲಿಂಗರಾಜರು

ಹುಟ್ಟಿದಿರಿ
ನೀವು ಶಿಗ್ಗಲಿಯ
ಕೊಂಪೆಯಲ್ಲಿ
ಬಡತನ ಬಳಲಿಕೆ
ದಾರಿದ್ರ್ಯದ ಬದುಕು
ಪ್ರತಿಭೆಗೆ ಉಸಿರು
ರಾಮಪ್ಪನ ಹೆಸರು
ಶಿರಸಂಗಿ ಸಂಸ್ಥಾನಕೆ
ದತ್ತು ಬಂದಿರಿ ನೀವು
ಕಟ್ಟಿದಿರಿ ಕೆರೆ ಭಾವಿ
ಕೃಷಿಯ ಸಿರಿ ಸಂಪತ್ತು
ಮಕ್ಕಳಿಲ್ಲದೆ ಬಂತು
ಸಂಸ್ಥಾನಕ್ಕೆ ಆಪತ್ತು
ಅರಟಾಳರ ಸಹಯೋಗ
ಅಥಣಿ ಶಿವಯೋಗಿಗಳ ದರ್ಶನ
ಮಕ್ಕಳೆಲ್ಲರೂ ನಿನ್ನವರು
ಶಿಕ್ಷಣಕೆ ಕೊಟ್ಟುಬಿಡು
ಶಿವಯೋಗಿಯ ವಾಣಿ
ಸಂಸ್ಥಾನವ ದಾನ ಮಾಡಿದರು
ಲಿಂಗಾಯತ ಮಕ್ಕಳಿಗೆ.
ಬಸವ ಹಚ್ಚಿದ ದೀಪಕ್ಕೆ
ತೈಲವಾದಿರಿ ನೀವು
ನಿಮ್ಮ ಬೆಳಕಲ್ಲೇ
ಬಾಳು ನೂಕಿದೆವು ನಾವು

                     ಡಾ.ಶಶಿಕಾಂತ.ಪಟ್ಟಣ ಪುಣೆ

( ಇಂದು ಸಿರಸಂಗಿಯ ಲಿಂಗರಾಜರ ಜಯಂತಿ 1861ಜನವರಿ 10 ಶಿಗ್ಗಲಿ ಒಣ ಸಿಗ್ಗಲಿಯಲ್ಲಿ ಹುಟ್ಟಿದ ರಾಮಪ್ಪ ಮುಂದೆ ಶಿರಸಂಗಿ ಸಂಸ್ಥಾನಕ್ಕೆ ಅಧಿಪತಿಯಾಗಿ ಜನಪರ ಕಾರ್ಯಕ್ರಮಗಳನ್ನು ಕೈಕೊಂಡು ಸಂಗ್ರಹ ಆಸ್ತಿಯನ್ನು ಬಡ ಲಿಂಗಾಯತ ಮಕ್ಕಳಿಗೆ ದಾನ ಮಾಡಿದ ಶ್ರೇಷ್ಠ ಪುರುಷ ಒಮ್ಮೆ ಅವರನ್ನು ನೆನೆಯೋಣ ಬನ್ನಿ )

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group