ಕವನ : ಶಿರಸಂಗಿ ಲಿಂಗರಾಜರು

Must Read

ಶಿರಸಂಗಿ ಲಿಂಗರಾಜರು

ಹುಟ್ಟಿದಿರಿ
ನೀವು ಶಿಗ್ಗಲಿಯ
ಕೊಂಪೆಯಲ್ಲಿ
ಬಡತನ ಬಳಲಿಕೆ
ದಾರಿದ್ರ್ಯದ ಬದುಕು
ಪ್ರತಿಭೆಗೆ ಉಸಿರು
ರಾಮಪ್ಪನ ಹೆಸರು
ಶಿರಸಂಗಿ ಸಂಸ್ಥಾನಕೆ
ದತ್ತು ಬಂದಿರಿ ನೀವು
ಕಟ್ಟಿದಿರಿ ಕೆರೆ ಭಾವಿ
ಕೃಷಿಯ ಸಿರಿ ಸಂಪತ್ತು
ಮಕ್ಕಳಿಲ್ಲದೆ ಬಂತು
ಸಂಸ್ಥಾನಕ್ಕೆ ಆಪತ್ತು
ಅರಟಾಳರ ಸಹಯೋಗ
ಅಥಣಿ ಶಿವಯೋಗಿಗಳ ದರ್ಶನ
ಮಕ್ಕಳೆಲ್ಲರೂ ನಿನ್ನವರು
ಶಿಕ್ಷಣಕೆ ಕೊಟ್ಟುಬಿಡು
ಶಿವಯೋಗಿಯ ವಾಣಿ
ಸಂಸ್ಥಾನವ ದಾನ ಮಾಡಿದರು
ಲಿಂಗಾಯತ ಮಕ್ಕಳಿಗೆ.
ಬಸವ ಹಚ್ಚಿದ ದೀಪಕ್ಕೆ
ತೈಲವಾದಿರಿ ನೀವು
ನಿಮ್ಮ ಬೆಳಕಲ್ಲೇ
ಬಾಳು ನೂಕಿದೆವು ನಾವು

                     ಡಾ.ಶಶಿಕಾಂತ.ಪಟ್ಟಣ ಪುಣೆ

( ಇಂದು ಸಿರಸಂಗಿಯ ಲಿಂಗರಾಜರ ಜಯಂತಿ 1861ಜನವರಿ 10 ಶಿಗ್ಗಲಿ ಒಣ ಸಿಗ್ಗಲಿಯಲ್ಲಿ ಹುಟ್ಟಿದ ರಾಮಪ್ಪ ಮುಂದೆ ಶಿರಸಂಗಿ ಸಂಸ್ಥಾನಕ್ಕೆ ಅಧಿಪತಿಯಾಗಿ ಜನಪರ ಕಾರ್ಯಕ್ರಮಗಳನ್ನು ಕೈಕೊಂಡು ಸಂಗ್ರಹ ಆಸ್ತಿಯನ್ನು ಬಡ ಲಿಂಗಾಯತ ಮಕ್ಕಳಿಗೆ ದಾನ ಮಾಡಿದ ಶ್ರೇಷ್ಠ ಪುರುಷ ಒಮ್ಮೆ ಅವರನ್ನು ನೆನೆಯೋಣ ಬನ್ನಿ )

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group