ಹರಿಸಿದರು ಬೇಂದ್ರೆ

Must Read

ಹರಿಸಿದರು ಬೇಂದ್ರೆ

ಹರಿಸಿದರು ಬೇಂದ್ರೆ
ಲೇಸನುಂಡು ಲೇಸುಸರಿ
ಲೇಸೇ ಮೈಯ ಪಡೆದು
ಚಿಮ್ಮಲಿ ಈ ಸುಖವೆಂದು
ಚೆನ್ನಸರಸತಿಯ
ನಿತ್ಯ ಸೇವೆ ಇರಲಿ ಒಲವಿರಲಿ
ಪ್ರಾಣಿ ಪಕ್ಷಿಗಳಲಿ
ನಮಿಸು ಗುರುಹಿರಿಯರ
ಪರಿಸರವ ಪ್ರೀತಿಸೆಂದು
ನಡೆನುಡಿಯಲ್ಲಿ ಚೆನ್ನುಡಿಯಲಿ
ಚಿಮ್ಮಿಸುತ ಮೃದುಭಾವ
ಅರಳಿಸುತೆಲ್ಲರ ಮನ
ದಿವ್ಯವಿರಲಿ ಜೀವನಾ
ಎಂದು ಹರಿಸಿದರು ಬೇಂದ್ರೆ
ವಿಶ್ವದ ಕುಲಕೋಟಿಯನು
ಹರಿಸಿದರು ಬೇಂದ್ರೆ
ವಿಶ್ವದ ಚೇತನರನು.

ರಾಧಾ ಶಾಮರಾವ
ಧಾರವಾಡ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group