ಮೋದಿ ಗರ್ಜನೆಗೆ ಮಣಿದು ಅಭಿನಂದನ್ ಬಿಡುಗಡೆ

Must Read

ಹೊಸದಿಲ್ಲಿ – ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಈ ಬಿಡುಗಡೆಗೆ ಶಾಂತಿಯ ಸಂಕೇತ ಎಂಬ ಹೆಸರನ್ನೂ ಪಾಕಿಸ್ತಾನ ಕೊಟ್ಟಿದ್ದು ನಗೆಪಾಟಲಿಗೆ ಈಡಾದಂತಾಗಿದೆ.

೨೦೧೯ ರ ಫೆ.೧೪ ರಂದು ಪಾಕ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ನ ಉಗ್ರರ ಅಡಗುದಾಣಗಳ ಮೇಲೆ ಹಠಾತ್ ದಾಳಿ ಮಾಡಿ ನೂರಾರು ಉಗ್ರರ ಮಾರಣ ಹೋಮ ನಡೆಸಿತ್ತು. ಆ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಪಾಕ್ ಸೈನಿಕರು ಅಭಿನಂದನ್ ಅವರಿಗೆ ತೀವ್ರ ಹಿಂಸೆಯನ್ನೂ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದರು.

ರಕ್ತ ಸಿಕ್ತ ಅಭಿನಂದನ್ ರ ವಿಡಿಯೋ ನೋಡಿದ್ದ ಪ್ರಧಾನಿ ನರೇಂದ್ರ ಮೋದಿ ಕ್ರುದ್ಧರಾಗಿ ಭಾರತೀಯ ಗುಪ್ತಚರ ಸಂಸ್ಥೆ ‘ ರಾ’ ಮುಖ್ಯಸ್ಥ ಧಸ್ಮಾನಾರನ್ನು ಸಂಪರ್ಕಿಸಿ, ಅಭಿನಂದನ್ ಗೆ ಏನಾದರೂ ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ದೀಪಾವಳಿ ಆಚರಣೆಗೆ ಶಸ್ತ್ರಾಸ್ತ್ರ ಇಟ್ಟುಕೊಂಡಿಲ್ಲ. ಪಾಕ್ ಗೆ ತಿಳಿಸಿ ಎಂದಿದ್ದರು.

ಮೋದಿಯವರ ಈ ಗುಡುಗಿಗೆ ಮಣಿದ ಪಾಕ್ ಅಭಿನಂದನರನ್ನು ಬಿಡುಗಡೆ ಮಾಡಿತ್ತು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group