ಕಾಣದ ಜೀವಿಯ ಹೋರಾಟ….ಕವನ

Must Read

ಕಣ್ಣಿಗೆ ಕಾಣದ ಜೀವಿಯೊಂದು ಭೂಮಿಗೆ ಅವತರಿಸಿ ಬಂದಿದೆ ಎಷ್ಟು ವರ್ಷದ ಅದರ ತಪಸ್ಸಿನ ಫಲವೇನು ಗಟ್ಟಿ ಮೆಟ್ಟು ಮಾಡಿದೆ

ಕೊರೋನಾ ಎಂಬ ಹೆಸರಿನಿಂದ ನರ್ತನವ ನಡೆಸಿದೆ ಮಾನವ ಶಕ್ತಿಯನ್ನು ಮೀರಿ ಅಟ್ಟಹಾಸ ಮೆರೆದಿದೆ ಜಗದ ತುಂಬ ತಲ್ಲಣವಗೊಳಿಸಿದೆ

ಅಲ್ಲೋಲ ಕಲ್ಲೋಲ ಮಾಡುತ್ತಾ ದೇಶದಿಂದ ದೇಶಕ್ಕೆ ಹಬ್ಬುತ್ತ ಸಾಗಿದೆ ಅದೆಷ್ಟೋ ಜೀವಗಳನ್ನು ಬಲಿ ತೆಗೆದು ಕೇಕೆ ಯಾಕೆ ನಗುತ್ತಿದೆ

ಒಬ್ಬರನ್ನೊಬ್ಬರು ಮುಟ್ಟಿದರೆ ಅಂಟಿಕೊಂಡು ಬಿಡುತ್ತದೆ
ಅಂತರಗಳ ಮಧ್ಯದಲ್ಲಿ ಹೊಂಚ ಹಾಕಿ ಕುಳಿತುಕೊಂಡು ಸಂಚನೊಂದು ಮಾಡುತ್ತಿದೆ ಸ್ವಲ್ಪ ಮೈಮರೆತರೆ ಮುತ್ತಿಕೊಂಡು ಬಿಡುತ್ತದೆ

ಚೀನಾದಲ್ಲಿ ಹುಟ್ಟಿ ವಿಶ್ವ ಪರ್ಯಟನ ಕೈಗೊಂಡಿದೆ
ಕಂಡಕಂಡ ರಾಷ್ಟ್ರಗಳಲ್ಲಿ ವಸ್ತಿ ಮಾಡಿ ಸದ್ದಿಲ್ಲದೆ ತನ್ನ ನೀಚ ಬುದ್ಧಿ ತೋರಿಸಿ ಜಾತ್ರೆಯನ್ನು ಮಾಡುತ್ತಿದೆ

ಯಾವ ಔಷಧಿಗೂ ಬಗ್ಗ ಲಾರದೇ ಕರಕಿಯ ಕಸ ಹಬ್ಬಿದ ಹಾಗೆ ಹಬ್ಬುತ್ತಿದೆ ಮಾನವ ಕುಲ ಎಂದು ಕಂಡರಿಯದ ಆತಂಕವ ಮೂಡಿಸಿದೆ

ಲಸಿಕೆ ಸಿಗುವವರೆಗೂ ನಡೆಯುವುದು ಅದರ ಚೆಲ್ಲಾಟ
ಆದಷ್ಟು ನಾವೆಲ್ಲಾ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಮುಗಿಯುವುದು ಅದರ ಕ್ರೂರ ಹೋರಾಟ

ಡಾ. ಎಫ್. ಡಿ. ಗಡ್ಡಿ ಗೌಡರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group