ಸಿಂದಗಿ: ಸಾರ್ವಜನಿಕರು ತಮ್ಮ ತಮ್ಮ ಮನೆಗಳ ಹಾಗೂ ಕೇರಿಗಳಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾಗ ಮಾತ್ರ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರು ಕಂಡ ಕನಸಿಗೆ ನೀರು ಎರೆದಂತಾಗುತ್ತದೆ ಎಂದು ಬೈರೋಡಗಿ ಶಾಲೆಯ ದೈಹಿಕ ಶಿಕ್ಷಕ ಶಿವಕುಮಾರ ಕಲ್ಲೂರ ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ಸಾಮಾಜಿಕ ಸೇವಾ ಸಮಿತಿ ಸಂಘ ದ ಸದಸ್ಯರಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ಧೂರ ಶಾಸ್ತ್ರೀ ಜಿ ಅವರ ಜನ್ಮ ದಿನದ ಪ್ರಯುಕ್ತ ಕಾಲೋನಿಯ ಉದ್ಯಾನವನದ ಆವರಣದಲ್ಲಿರುವ ಕಸವನ್ನು ಕೀಳುವದರ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಚೌಧರಿ ಕಾಲೋನಿಯ. ರಮೇಶ ಬಿರಾದಾರ, ಸಿದ್ಧಣ್ಣ ಚೌಧರಿ, ವಿಜಯಕುಮಾರ ಸಗರ, ಶಿವಕುಮಾರ ಕಲ್ಲೂರ, ಸಿ.ಡಿ.ಚೌಧರಿ, ಶಿವಾನಂದ ಹಿರೇಮಠ, ಎಸ್. ಬಿ. ಕುಲಕರ್ಣಿ, ಸತೀಶ ಚೌಧರಿ, ಬಸವರಾಜ ಸಜ್ಜನ, ಅರ್ಜುನ ಬಿರಾದಾರ, ಶಿವು ಪಾಟೀಲ, ಬಸು ಚೌಧರಿ, ಮಹೇಶ ಕಲಶೆಟ್ಟಿ, ಶಿವಾನಂದ ಶಹಾಪೂರ, ಶಿವು ಕಲಶೆಟ್ಟಿ ಸೇರಿದಂತೆ ಅನೇಕರಿದ್ದರು.