spot_img
spot_img

ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

Must Read

spot_img
 ಮೈಸೂರು –  ಪರಮಪೂಜ್ಯ ಶ್ರೀವಿದ್ಯಾಶ್ರೀಶತೀರ್ಥಶ್ರೀಪಾದರು ಸ್ಥಾಪಿಸಿದ ಮೈಸೂರಿನ ಶ್ರೀವ್ಯಾಸತೀರ್ಥವಿದ್ಯಾಪೀಠವು ಅನೇಕ ಶಾಸ್ತ್ರಗಳನ್ನು ಪಾಠ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ.  ಈ ವ್ಯಾಸತೀರ್ಥವಿದ್ಯಾಪೀಠವು ವಿದ್ಯಾಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿದ್ದು ಈಗ ಮತ್ತೊಂದು ಸಾಧನೆಯನ್ನು ಮಾಡಿದೆ.
   ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾಪೀಠದ ಮೂವರು ಬಹುಮಾನವನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ರಾಷ್ಟ್ರಾದ್ಯಂತ ಬರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಖ್ಯಾತನಾಮ ವಿದ್ವಾಂಸರು ಸ್ವತಃ ಪರೀಕ್ಷೆಯನ್ನು ಮಾಡಿ ನಿರ್ಣಯವನ್ನು ನೀಡಿರುತ್ತಾರೆ.
 ಈ ಹಿಂದೆಯೂ ಅನೇಕ ಬಾರಿ ರಾಜ್ಯಮಟ್ಟದ ಹಾಗು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಸ್ವರ್ಣ-ರಜತ -ಕಂಚಿನ ಪದಕಗಳನ್ನು ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.
  ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಖ್ಯಾತ ಯೋಗ ಗುರು ಬಾಬಾ ರಾಮದೇವ್, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ ಶ್ರೀನಿವಾಸ ವರಖೇಡಿ ಮೊದಲಾದವರು ಉಪಸ್ಥಿತರಿದ್ದರು. ಬಹುಮಾನ ಪಡೆದವರು…
 ಡಿ. ಪ್ರಣವಾಚಾರ್ಯ – ನ್ಯಾಯಭಾಷಣ – ರಜತಪದಕ.
ಶ್ರೀಶಾಚಾರ್ಯ ಅಯಾಚಿತ – ಬೌದ್ಧಭಾಷಣ – ರಜತಪದಕ.                                                                 ಚಿ. ವಲ್ಲಭ – ಸಾಹಿತ್ಯ ಶಲಾಕಾ-ಕಂಚಿನ ಪದಕ.
ಬಹುಮಾನ ವಿಜೇತರೆಲ್ಲರನ್ನೂ ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಮೈಸೂರು ಇದರ ಗೌರವಕಾರ್ಯದರ್ಶಿಗಳು
ಪ್ರಾಂಶುಪಾಲರು ಅಧ್ಯಾಪಕ ಮತ್ತು ವಿದ್ಯಾರ್ಥಿವೃಂದದವರು ಅಭಿನಂದಿಸಿದ್ದಾರೆ.
- Advertisement -

LEAVE A REPLY

Please enter your comment!
Please enter your name here

- Advertisement -

Latest News

2014-15 ರಿಂದ 1.77 ಕೋಟಿ ರೈತರಿಗೆ ಮಣ್ಣಿನ ಕಾರ್ಡ್ ವಿತರಣೆ – ಈರಣ್ಣ ಕಡಾಡಿ

ಮೂಡಲಗಿ: ರೈತರಿಗೆ ಮಣ್ಣಿನ ಗುಣಮಟ್ಟವನ್ನು ನಿರ್ಧರಿಸಲು ಮತ್ತು ಅವರ ಕೃಷಿ ಉತ್ಪನ್ನಗಳಿಂದ ಲಾಭದಾಯಕ ಫಲಿತಾಂಶಗಳನ್ನು ಪಡೆಯಲು 2014-15 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 1.77 ಕೋಟಿ ರೈತರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group