- Advertisement -
ಸಿಂದಗಿ: ಜಾನಪದ ಭಾರತದ ಸನಾತನ ಸಂಸ್ಕೃತಿಯಾಗಿದ್ದು,ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿದ್ದು ಅದಕ್ಕೆ ಪೂರಕವಾಗಿ ನಾನು ಸಹಾಯ ಸಹಕಾರ ನೀಡುವುದಾಗಿ ಸಿಂದಗಿ ನೂತನ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ) ಪಡಗಾನೂರ ವತಿಯಿಂದ ಸಿಂದಗಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಜಾನಪದ ಸಂಸ್ಕೃತಿ ಸೊರಗುತ್ತಿದೆ.ಅದನ್ನು ಕಾಪಾಡೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ದೇವರಹಿಪ್ಪರಗಿ ತಾಲೂಕಾಧ್ಯಕ್ಷ ನಾನಾಗೌಡ ಪಾಟೀಲ ,ಆಲಮೇಲ ತಾಲೂಕಾಧ್ಯಕ್ಷ ಆರ್ ಜಿ ಬಿರಾದಾರ ಜಿಲ್ಲಾ ಜಂಟಿ ಕಾರ್ಯದರ್ಶಿ ಈರಣ್ಣ ಹೊಸಟ್ಟಿ, ಜಿಲ್ಲಾ ಸಂಚಾಲಕ ಪ್ರೊ. ಜಿ ಎಂ ಹಳ್ಳೂರ,ಶಿಕ್ಷಕ ಅಖೀಲ ಬಾಗವಾನ ಮತ್ತಿತರು ಉಪಸ್ಥಿತರಿದ್ದರು.