Times of ಕರ್ನಾಟಕ

ಗುರ್ಚಿ ಹಾಡು

ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ ಅದನ್ನು ಭ್ರಷ್ಟಾಚಾರಿ ರಾಜಕಾರಣಿಗೆ ಹೋಲಿಸಿ ಬರೆಯಲಾಗಿದೆ. ಭ್ರಷ್ಟಾಚಾರಿ ಬುಚಿ೯ ಬುಚಿ೯ ಎಲ್ಲಾಡಿ ಬಂದಿ ಖುಚಿ೯ಗಾಗಿ ಸುತ್ತಾಡಿ ಬಂದಿ ಹಳ್ಳಾ ಕೊಳ್ಳಾ ಮಾರಿ ತಿಂದಿ ಮೆಂಬರ ಆಗಿ ಮೆರದಾಡಿ ಬಂದಿ. ಹುಯ್ಯೋ ಹುಯ್ಯೋ ಮಳೆರಾಯ ಅಂದಿ. ರೊಕ್ಕದ ಮಳೆಯು ಬರಲಿ...

ಕವನ: ನಾನು-ನಾನೆಂಬ ಅಹಮಿಕೆ ಬೇಕೇ?

ತಿನ್ನುವ ಹಿಡಿ ಅನ್ನಕೆ, ಸೂರ್ಯ ನೀಡುವ ಬೆಳಕಿಗೆ, ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ , ಪ್ರಕೃತಿ ನೀಡುವ ಹನಿ-ಹನಿ ಜಲಕೆ , ಜೀವಮಾನ ಸವೆಸುವ ಓ ಮಾನವ , 'ನಾನು,ನಾನು! 'ಎಂಬ ಅಹಮಿಕೆ ಬೇಕೇ ??? ಇನಿದನಿಯಲಿ ಹಾಡುವ ಕೋಗಿಲೆಗೆ, ಸುಂದರ ದನಿ ನೀಡಿದ್ದು ನೀನೇನಾ ? ಮುಗಿಲೆತ್ತರಕೆ ಹಾರುವ ಹಕ್ಕಿಗೆ, ಹಾರುವುದ ಕಲಿಸಿದ್ದು ನೀನೇನಾ ? ನೀರಲಿ ಸ್ವಚ್ಛಂದವಾಗಿ ಈಜುವ ಮೀನಿಗೆ ಈಜು ಕಲಿಸಿದ್ದು ನೀನೇನಾ ??? ನಾನು, ನಾನೆಂದು...

ಗಜಲ್ ಗಳು

ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ ಬದುಕು ಅತಂತ್ರಾಗಿ ಎದ್ದು ಬಿದ್ದು ಇನ ಪಾಜಿಗಟ್ಟಿ ಮುಟ್ಟುದೈತಿ ಕತ್ತು ಹಿಡದು ಬೀದಿಗಿ ನೂಕಿದಮ್ಯಾಲ ಬದುಕಾಕೆಲ್ಲೈತಿ ಜಾಗ ಬದುಕಿನ ಆಟಕ್ಕ ತೆರಿ ಬೀಳುತನಕ ಬಣ್ಣ ಹಚ್ಚಿ ಜೀವ ತುಂಬುತೀನಿ...

ರವಿವಾರದ ಕವನಗಳು

ನಮ್ಮೂರು ಬದಲಾಗಿದೆ ಟಿವಿಗಳು ಬಂದ ಮೇಲೆ ಹಂತಿಪದ ಬೀಸುವಪದ ಡಪ್ಪಿನಾಟ ಬಯಲಾಟ ಕೋಲಾಟ ಡೊಳ್ಳಿನಪದ ಪುರಾಣ ಕೀರ್ತನ ಭಜನೆ ಕೇಳದಂತಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಟ್ರಾಕ್ಟರ್ ಬಂದಮೇಲೆ ಜೋಡೆತ್ತುಗಳಿಗೆ ಗೆಜ್ಜೆ ಗಗ್ಗರಿ ಕೋಡಣಸು ಜೂಲ ಹಾಕಿ ಸವಾರಿ ಬಂಡಿಯಲಿ ಜಾತ್ರೆಗೆ ಹೋಗುವ ಮಜಾ ಮಾಯವಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕಾನ್ವೆಂಟ ಶಾಲೆಗಳು ತೆರೆದ ಮೇಲೆ ಹಿರೀಕರು ಹೇಳುತಿದ್ದ ಗಾದೆ ಒಡಪು ಒಡವು ಬಾಯಿಲೆಕ್ಕ ಸಮಸ್ಯಾಗಣಿತ ಜಾನಪದಕಥೆಗಳನ್ನು ಹೇಳುವರಿಲ್ಲ ಕೇಳುವರಿಲ್ಲ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕ್ರಿಕೆಟ್ ಬಂದ ಮೇಲೆ ಹುಲಿಮನೆ ಚವ್ವ ಗೋಟುಗುಣಿ ಬಗರಿ ಕುಂಟೆಬಿಲ್ಲೆ ಚಿಣಿದಾಂಡು ಮರಕೋತಿ ಗೋಲಿಗುಂಡು ಆಟಗಳು ಬಂಧಾಗಿವೆ ಆಗಿನಂತಿಲ್ಲ ಈಗ ನಮ್ಮೂರು...

ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ

ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ. ಕಂಪನಿಯ 43 ನೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದ್ದು ಜಿಯೋದಿಂದ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಗೊಳಿಸಲಾಗಿದೆ. ಮುಂದಿನ ವರ್ಷ ಇದನ್ನು ಆರಂಭಿಸುವುದರ...

ಚುಟುಕು ಹಾಗೂ ಕವನ

ನಮ್ಮೂರ ಸಿದ್ಧ ನಮ್ಮೂರ ಸಿದ್ಧ ಕುಟುಂಬ ಯೋಜನೆಗೆ ಬದ್ಧ, ಆ-ರತಿಗೊಂದು, ಈ-ರತಿಗೊಂದು ಅವನಿಗೆ ನಮ್ಮೂರಲ್ಲಿ ಎರಡೇ ಮಕ್ಕಳು.. ಸಿ(ಕ)ಹಿಸುದ್ಧಿ ಸೀಮೆಯೆಣ್ಣೆ ಸುರಿದು, ಸೊಸೆಯರ ಕೊಲ್ಲುವ ಅತ್ತೆಯರಿಗೊಂದು ಸಿ(ಕ)ಹಿ ಸುದ್ದಿ, ಹೀಗೇ ಸಾಗಿದರೆ ಸೊಸೆಯರೇ ನಿಮ್ಮನ್ನು ಕೊಲ್ಲುವರು ಗುದ್ದಿ ಗುದ್ದಿ!! ಫಲಕ ಮಹಿಳಾ ಕಾಲೇಜೊಂದರ ಮುಂದೆ, ರಸ್ತೆ ಸೂಚನಾ ಫಲಕ "ಈ ರಸ್ತೆಯಲಿ ಭಾರೀ ಉಬ್ಬು-ತಗ್ಗುಗಳಿವೆ ಎಚ್ಚರಿಕೆ...!!" ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳು, ಪತ್ರಕರ್ತರು ಮೊ:94496 80583, ಹಾರು ನೀ ಹಾರು ಗೂಡಲಿದ್ದ ಮರಿಯೊಂದು ಜಾರಿ ಕೆಳಗೆ ಬಿದ್ದಿತು ಹಾರಲು ಬಾರದೇ ಭಯದಿ ಮುದುಡಿ ನಡುಗುತ್ತಿತ್ತು. ದೂರದ ಪೊದೆಯಲಿ ಠಕ್ಕ ನರಿಯೊಂದು ಪಿಳಿಪಿಳಿ ಕಣ್ಣು ಬಿಡುತ್ತಿತು ಮರಿಯನು ತಿನ್ನಲು ಕಾದು ಕುಳಿತಿತ್ತು. ಕಾಗೆಯೊಂದು ಹಾರಿ ಬಂದು ಮರದ ಮೇಲೆ ಕುಳಿತಿತು ಭಯದಿ ನಡುಗುವ...

ವಚನಗಳು

೧ ಕೆಂಡದನುಭವ ಮೈಯ ಬೇಯಿಸಿತ್ತು ಉಂಡನುಭವ ಉದರ ಹೊರೆಯಿತ್ತು ಗಂಡನುಭವ ರಣದಿ ಜಯವ ತಂದಿತ್ತು ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು ಹಿತಮಿತದನುಭವ ಭವವ ಗೆಲಿಸಿತ್ತಯ್ಯ ಸೊಗಲ ಸೋಮೇಶ್ವರ ೨ ಸತ್ಯವಂತರೇ ನುಡಿಯಲಿ ಎಡುವುತಿಹರಯ್ಯ ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ ವಿಚಾರಿಗಳೇ ವಾದದಿ ಕುಯುಕ್ತಿಗಿಳಿದಿಹರಯ್ಯ ದಾರಿತೋರ್ವ ಗುರುವೇ ಬಟ್ಟೆಗೆಟ್ಟಿಹರಯ್ಯ ಪಾಲಿಸಬೇಕಾದವರೇ ನೇಮ ಮುರಿಯುತಿಹರಯ್ಯ ಪೋಷಣೆ ಮಾಡಬೇಕಾದಾವರೇ ಆಪೋಷಿಸುತಿಹರಯ್ಯ ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ ಇಂತ ತನು ಮನ ಧನಗೆಟ್ಟಿಹ ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ ಸೊಗಲ ಸೋಮೇಶ್ವರ ೩ ಕಣ್ಸೆಳೆವ ಸೌಂದರ್ಯ ಸೃಜಿಸಿದೆ ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ ಸುಗಂಧ ಪರಿಮಳವ...

ವೃಕ್ಷ ಬೀಜಾರೋಪನದಲ್ಲಿ ಪಾಲ್ಗೊಳ್ಳಿ

ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ ಸವದತ್ತಿಯ "ವೃಕ್ಷ ಭಾರತ ಸೈನಿಕರು" ಸುಮಾರು ೧೨ ಲಕ್ಷ ಬೀಜಗಳನ್ನು ಸಂಗ್ರಹಣೆ ಮಾಡಿದ್ದು ಉಚಿತವಾಗಿ ಹಂಚಲಿದ್ದಾರೆ. ಈ ನಿಸರ್ಗ ಸೇವೆಗಾಗಿ ಆಸಕ್ತರು...

ಅಮಿತಾಭ ಬಚ್ಚನ್ ಗೆ ಕೊರೋನಾ ; ಆಸ್ಪತ್ರೆಗೆ ದಾಖಲು

ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ಎಪ್ರಿಲ್ ನಲ್ಲಿ ಅವರೇ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿ ಮಂಜಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆದರೆ ನಾನೇನು ಕುರುಡನಾಗಿಲ್ಲ...

ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಎಲ್ಲರಿಗೂ ನಮಸ್ಕಾರ,  ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ. 1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು ಆಗದ ನಿಷ್ಕೃಷ್ಠ , ದುರ್ಬಲ ವೈರಾಣು. 2) ಈಗಾಗಲೇ ಎಷ್ಟೋ ಜನರ ದೇಹವನ್ನು ಹೊಕ್ಕು ಅವರ ಅರಿವಿಗೆ ಬಾರದೆ ಹೊರಟು ಹೋಗಿರಬಹುದಾದ...

About Me

10437 POSTS
1 COMMENTS
- Advertisement -spot_img

Latest News

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -spot_img
close
error: Content is protected !!
Join WhatsApp Group