Times of ಕರ್ನಾಟಕ
ಸುದ್ದಿಗಳು
ಜನವರಿ 13 ಕಲಾವಿದೆ ಸುಧಾ ಪ್ರಸನ್ನ ಅಭಿನಯದ ‘ಪಾಂಚಾಲಿ’ ನಾಟಕ ಪ್ರದರ್ಶನ
ಬೆಂಗಳೂರಿನ ನಾಟ್ಯ ದರ್ಪಣ ಸಂಸ್ಥೆಯ ವತಿಯಿಂದ ಖ್ಯಾತ ರಂಗಕರ್ಮಿ ಅಬ್ಬೂರು ಜಯತೀರ್ಥ ನಿರ್ದೇಶಿಸಿರುವ, ಹಿರಿಯ ರಂಗ ಕಲಾವಿದೆ ಸುಧಾ ಪ್ರಸನ್ನ ಅಭಿನಯದ ‘ಪಾಂಚಾಲಿ’ ನಾಟಕ ಪ್ರದರ್ಶನವನ್ನು ಇದೇ ಜನವರಿ 13 ಶುಕ್ರವಾರ ಸಂಜೆ 7.00 ನಗರದ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.ನಾಟಕ ಬೆಂಗಳೂರು 2023ರ ಅಂವಾಗಿ ನಡೆಯುತ್ತಿರುವ 15ನೇ ವರ್ಷದ ರಂಗ ಸಂಭ್ರಮ ನಾಟಕೋತ್ಸವದಲ್ಲಿ...
ಸುದ್ದಿಗಳು
ಗುರ್ಲಾಪೂರದ ಅಯ್ಯಪ್ಪನಿಗೆ ಪಟ್ಟಾಭಿಷೇಕ
ಗುರ್ಲಾಪೂರ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರವು ಭಕ್ತಿಗೆ ಹೆಸರವಾಸಿಯಾಗಿದೆ ಅಂತಹ ಗ್ರಾಮದ ಹೃದಯ ಭಾಗದಲ್ಲಿರುವ ಅಯ್ಯಪ್ಪಸ್ವಾಮಿಯ ಶನಿವಾರ ದಿ.14 ರಂದು ಮಕರ ಸಂಕ್ರಮಣ ದಿನದಂದು ಮಹಾ ಪೂಜೆಯೂ ಗುರು ಸ್ವಾಮಿಗಳ ಸಾನ್ನಿಧ್ಯದಲ್ಲಿ ಅತಿ ವಿಜೃಂಭಣೆಯಿ0ದ ಅಯ್ಯಪ್ಪನಿಗೆ ಪಟ್ಟಾಭಿಷೇಕ ನಡೆಸಲಾಗುವದು.ಸಂಜೆ 6 ಗಂಟೆಗೆ ಅಯ್ಯಪ್ಪನ ಕನ್ಯಾಸ್ವಾಮಿಗಳು ಹಾಗು ಗುರುಸ್ವಾಮಿಗಳು ಮಕ್ಕಳು ಮುತೈದೆಯರು ಸೇರಿ ಗ್ರಾಮದ ಕಂಬಳಿ ಪ್ಲಾಟದ...
ಸುದ್ದಿಗಳು
ಜ.13ರಂದು ಪಂಚಮಸಾಲಿಗೆ ಮೀಸಲಾತಿಗಾಗಿ ಮುಖ್ಯಮಂತ್ರಿ ಮನೆ ಮುಂದೆ ಸತ್ಯಾಗ್ರಹ- ಫಿರೋಜಿ
ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜ.13 ರಂದು ಶಿಗ್ಗಾವಿಯ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಬೆಳಗಾವಿ ಜಿಲ್ಲೆ ಪಂಚಮಸಾಲಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು.ಬುಧವಾರದಂದು ಪಟ್ಟಣದ...
ಸುದ್ದಿಗಳು
ಸಹೃದಯ ಸಾಹಿತ್ಯ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಸವದತ್ತಿ- ತಾಲೂಕಿನ ಸಹೃದಯ ಸಾಹಿತ್ಯ ಪ್ರತಿಷ್ಠಾನವು ೨೦೨೨ ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲನಗಳಿಗೆ ಕಾವ್ಯ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.ಕಾವ್ಯ ಪ್ರಶಸ್ತಿಯು ರೂ. ೫೦೦೦ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಆಸಕ್ತ ಲೇಖಕರು ೨೦೨೨ ರ ಜನವರಿಯಿಂದ ಡಿಸೆಂಬರ್ವರೆಗೆ ಪ್ರಕಟವಾದ ತಮ್ಮ ಕವನ ಹಾಗೂ...
ಸುದ್ದಿಗಳು
ಚುನಾವಣೆ ಹೊಸ್ತಿಲಲ್ಲಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ; ಡಿಸಿ
ಸಿಂದಗಿ: ಚುನಾವಣೆ ಹೊಸ್ತಿಲಲ್ಲೆ ಇರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ಮತಗಟ್ಟೆಯಲ್ಲಿ ಮೂಲ ಸೌಕರ್ಯ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ಬೆಂಗಳೂರಿನಿಂದ ಆಗಮಿಸಿದ ಜಿಲ್ಲಾಧಿಕಾರಿಗಳು ಕಲಬುರ್ಗಿಯಿಂದ ವಿಜಯಪುರ ಮಾರ್ಗವಾಗಿ ಬರುವಾಗ ಮೋರಟಗಿ ಗ್ರಾಮದ ಮತಗಟ್ಟೆ ಸಂಖ್ಯೆ 112,113,114,115,116 ಮತ್ತು 117 ಮತಗಟ್ಟೆಗಳು ಸೇರಿದಂತೆ ಪಕ್ಕದ ಗ್ರಾಮಗಳಾದ...
ಸುದ್ದಿಗಳು
ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಮೂಡಲಗಿ - ದಿ. ೧೮ ರಂದು ತಾಲೂಕಿನ ಶಿವಾಪೂರ ಗ್ರಾಮದಲ್ಲಿ ನಡೆಯಲಿರುವ ಮೂಡಲಗಿ ತಾಲ್ಲೂಕು ೨ ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರೇ.ಭಾಸ್ಕರ ಸಣ್ಣಕ್ಕಿಯವರಿಗೆ ತಾಲೂಕಾ ಕಸಾಪ ವತಿಯಿಂದ ಆಹ್ವಾನ ನೀಡಲಾಯಿತು.ತಾಲೂಕಾ ಕಸಾಪ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿಯವರ ಜೊತೆ ಬಿ ವಾಯ್ ಶಿವಾಪೂರ, ಎ ಎಚ್ ವಂಟಗೋಡಿ, ಬಿ ಆರ್ ತರಕಾರ, ಶಾಬು ಸಣ್ಣಕ್ಕಿ...
ಸುದ್ದಿಗಳು
ಮೂಡಲಗಿಯ ಹೆಮ್ಮೆಯ ಚಿತ್ರ ಕಲಾವಿದ ಹಣಮಂತ ಗುಬಚಿ
ಮೂಡಲಗಿ: ಕೆಲವರಿರುತ್ತಾರೆ, ಡ್ರಾಯಿಂಗ್ ಮಾಡಿದ್ದೋ ಅಥವಾ ಕ್ಯಾಮೆರಾದಲ್ಲಿ ತೆಗೆದ ಫೋಟೋವೋ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುತ್ತಾರೆ.ಅಂಥ ಕಲಾವಿದರೊಬ್ಬರು ಮೂಡಲಗಿಯಲ್ಲಿ ಇದ್ದಾರೆ. ಅವರೇ ಹಣಮಂತ ಗುಬಚಿ. ಬ್ಯಾನರ್ ಗಳ ಈ ಕಾಲದಲ್ಲಿಯೂ ತಮ್ಮ ಕೈಯಿಂದ ಅದ್ಭುತ ಚಿತ್ರ ಬಿಡಿಸುವ ಹಣಮಂತ ಗುಬಚಿಯವರ ಕಲೆ ಸುಂದರವಾದದ್ದು.ಬಹಳಷ್ಟು ಮಂದಿ ಕ್ಯಾಮೆರಾದಲ್ಲಿ ಫೋಟೋಗಳನ್ನು ತೆಗೆಯುತ್ತಾರೆ. ಆದರೆ ಅವರಲ್ಲಿ...
ಸುದ್ದಿಗಳು
ದೈಹಿಕ, ಮಾನಸಿಕ ದೃಢತೆಗೆ ಕ್ರೀಡೆಗಳು ಸಹಕಾರಿ- ಸರ್ವೋತ್ತಮ ಜಾರಕಿಹೊಳಿ
ಹಲಗಿ: ಕುಸ್ತಿ, ಕಬಡ್ಡಿ, ಖೋಖೋ, ವಾಲಿಬಾಲ್ದಂತಹ ಗ್ರಾಮೀಣ ಕ್ರೀಡೆಗಳು ಮನುಷ್ಯನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಸಹಕಾರಿಯಾಗಿವೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಸೋಮವಾರದಂದು ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ತಾಲೂಕಾ ಪಂಚಾಯತ್ ಮೂಡಲಗಿ,...
ಸುದ್ದಿಗಳು
ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ ಪ್ರದರ್ಶನ
ಮೂಡಲಗಿ: ತಾಲೂಕಿನ ಹೊಸಯರಗುದ್ರಿ ಗ್ರಾಮದಲ್ಲಿ ಶ್ರೀ ಈರಾಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ತವಾಗಿ ಜ.11 ರಂದು ರಾತ್ರಿ 9-30ಕ್ಕೆ ಗ್ರಾಮದ ಶ್ರೀ ಲಕ್ಷ್ಮೀ ದೇವಿ ನಾಟ್ಯ ಸಂಘ ಅರ್ಪಿಸುವ 5ನೇ ಕಲಾಕುಸುಮ ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಉಮೇಶ ಚಿಪ್ಪಲಕಟ್ಟಿ ತಿಳಿಸಿದಾರೆ.ಸಮಾರಂಭದ ಸಾನ್ನಿಧ್ಯವನ್ನು ಮರೆಗುದ್ದಿಯ ಶ್ರೀ ನಿರುಪಾಧೀಶ್ವರ ಶ್ರೀಗಳು, ಹೊಸಯರಗುದ್ರಿಯ ಶ್ರೀ...
ಸುದ್ದಿಗಳು
ಇಂದಿನಿಂದ ಹೊಸಯರಗುದ್ರಿಯಲ್ಲಿ ಈರಾಲಿಂಗೇಶ್ವರ ಜಾತ್ರೆ
ಮೂಡಲಗಿ: ತಾಲೂಕಿನ ಹೊಸಯರಗುದ್ರಿ ಗ್ರಾಮದ ಶ್ರೀ ಈರಾಲಿಂಗೇಶ್ವರ ಮಠದಲ್ಲಿ ಬ್ರಹ್ಮೈಕ್ಯ ಅವಧೂತ ಶ್ರೀ ಸದ್ಗುರು ಈರಾಲಿಂಗೇಶ್ವರ ಶಿವಯೋಗಿಗಳ 38ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಶ್ರೀನಿವಾಸ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತವಾಗಿ ಜ.11 ರಿಂದ 13ವರಿಗೆ ಸತ್ಸಂಗ ಸಮ್ಮೇಳನ ಮತ್ತು ಮಹಾರಥೋತ್ಸವ ಹಾಗೂ ವಿಶ್ವಶಾಂತಿಗಾಗಿ ಮಹಾಚಂಡಿ ಹೋಮ ಕಾರ್ಯಕ್ರಮ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮೀಜಿಗಳ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



