Times of ಕರ್ನಾಟಕ
ಸುದ್ದಿಗಳು
ಶಿಸ್ತುಬದ್ಧ ಅಧ್ಯಯನದಿಂದ ಸಾಧನೆ ಸಾಧ್ಯ – ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ
ಬೈಲಹೊಂಗಲ: ಶಿಸ್ತುಬದ್ಧ ಅಧ್ಯಯನದಿಂದ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ರಾಮದುರ್ಗ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪ್ರೇರಣಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಉತ್ತಮ ಬರವಣಿಗೆ ಬಹಳ ಮುಖ್ಯವಾಗಿದ್ದು ಪಠ್ಯಪುಸ್ತಕಗಳ ಜೊತೆಗೆ ಪ್ರತಿದಿನ ದಿನಪತ್ರಿಕೆ ಮತ್ತು...
ಸುದ್ದಿಗಳು
ಶಿವನು ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸಿನ ದ್ಯೋತಕ – ಡಾ. ಸಾರಂಗದೇವ ಶ್ರೀಗಳು
ಸಿಂದಗಿ - ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ ಎಂದು ಸಾರಂಗ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಇವರು ಹಮ್ಮಿಕೊಂಡ 86ನೇ ಶಿವ ಜಯಂತಿ ಪ್ರಯುಕ್ತ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ...
ಕವನ
ಕವನ: ಭಕ್ತಿ
ಓಂ ನಮ ಶಿವಾಯ.
ಸರಳ ಪೂಜಾ ಪ್ರಿಯ.
ನಿನ್ನ ಅಲಂಕಾರಕ್ಕೆ ಬೇಕು
ನಂದಾ, ಭದ್ರಾ, ಸುಮನಾ, ಸುಶೀಲಾ ಎಂಬ ಗೋವುಗಳ
ಗೋಮಯದಿಂದ ತಯಾರಿಸಿದ ಭಸ್ಮ.
ಆ ವಿಭೂತಿ ಧರಿಸಿದ ಭಕ್ತನಾಗಲಾರ ದರಿದ್ರ.
ಪಂಚಾಕ್ಷರಿ ಮಂತ್ರ ಜಪಿಸಿದರೆ ಇಲ್ಲ ಕಷ್ಟ.
ಶುದ್ಧ ಜಲ, ಬಿಲ್ವ ಪತ್ರೆ, ಶುದ್ಧ ಭಕ್ತಿ ಸಾಕು
ನಿನ್ನೊಲಿಸಿಕೊಳ್ಳಲು.
ನಿನ್ನನ್ನು ಪ್ರತಿಕ್ಷಣ ಸ್ಮರಿಸಿದವರಿಗಿಲ್ಲ ಕಷ್ಟ ನಷ್ಟ.
ಕರುಣಿಸೆಲ್ಲರಿಗೂ ಒಳ್ಳೆಯ ಮನಸ್ಥಿತಿ.
ಮಾಡು ಭೂಲೋಕವನ್ನು
ಕೆಟ್ಟ ಕೃತ್ಯಗಳಿಂದ ವಿಮುಕ್ತಿ.
ಅರ್ಪಿಸುವೆ ನಿನಗೆ ನನ್ನೀ...
ಸುದ್ದಿಗಳು
ಮೂಡಲಗಿಯಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ
ದಲಿತ ವಚನಕಾರ ಕುರಿತು ಚಿಂತನ, ಮಂಥನಗಳು ನಡೆಯಬೇಕು
ಮೂಡಲಗಿ: ‘ದಲಿತ ವಚನಕಾರರ ಸಾಧನೆ, ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಗೊತ್ತಾಗುವ ರೀತಿಯಲ್ಲಿ ನಿರಂತರವಾಗಿ ಚಿಂತನ, ಮಂಥನಗಳು ನಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಂಗಳವಾರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದ ಶರಣರಲ್ಲಿ...
ಸುದ್ದಿಗಳು
ಕಾಯಕ ಶರಣರ ಜಯಂತಿ : ಶರಣರು ಸಮಾಜದಲ್ಲಿನ ಮೌಢ್ಯಗಳು ಹೋಗಲಾಡಿಸಿದರು
ಸಿಂದಗಿ: 12 ನೇ ಶತಮಾನದಲ್ಲಿ ಶರಣರು ಕಟ್ಟಿದ ಸಮಾಜದಲ್ಲಿ ಉಂಬಲ್ಲಿ, ಉಡುವಲ್ಲಿ, ಕೊಂಬಲ್ಲಿ, ಕೊಡುವಲ್ಲಿ ಕುಲವನರಸುವುದು ಹೋಗಿ ಜನಗಳಲ್ಲಿ ಶತ ಶತಮಾನಗಳಿಂದ ಬೆಳೆದು ಬಂದ ಮೌಡ್ಯತೆಗಳು ಮಾಯವಾದವು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.ತಹಶೀಲದಾರ ಕಾರ್ಯಾಲಯದಲ್ಲಿ ಕಾಯಕ ಶರಣರಾದ ಶ್ರೀ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ, ಡೋಹರ...
ಸುದ್ದಿಗಳು
ಗಾಂಧೀ ಲೇಖನ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಣೆ
ಸರ್ವೋದಯ ದಿನದ ಅಂಗವಾಗಿ ಗಾಂಧೀ ಶಾಂತಿ ಪ್ರತಿಷ್ಠಾನ ಮತ್ತು ಅಮರ ಬಾಪು ಚಿಂತನ ಸಹಯೋಗಯಲ್ಲಿ ‘ಅಂದಿಗೂ ಇಂದಿಗೂ ಗಾಂಧೀಜಿ ವಿಚಾರಧಾರೆಗಳು ಪ್ರಸ್ತುತ’ ಪ್ರಬಂಧ ಹಾಗೂ ‘ಗಾಂಧಿಗೆ ಒಂದು ಪತ್ರ’ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪಿಇಎಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಫಣೀಂದ್ರ. ಎ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ...
ಸುದ್ದಿಗಳು
ಅವಗುಣಗಳನ್ನು ತ್ಯಜಿಸಿ ಜೀವನ ಸುಂದರವಾಗಿಸಿಕೊಳ್ಳಿರಿ
ಮೂಡಲಗಿ: ‘ಮನುಷ್ಯ ತನ್ನಲ್ಲಿಯ ಅವಗುಣಗಳನ್ನು ತ್ಯಜಿಸಿ ಉತ್ತಮ ಆಚಾರ, ವಿಚಾರಗಳ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಮಂಗಳವಾರ ಆಚರಿಸಲಾದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಭಕ್ತಿಯಿಂದ ಮಾಡುವ ಧ್ಯಾನವು ಪರಮಾತ್ಮನ ಕೃಪೆಗೆ ಪಾತ್ರವಾಗುತ್ತದೆ ಎಂದರು.ಭಕ್ತಿ ಮತ್ತು ಧ್ಯಾನವು...
ಸುದ್ದಿಗಳು
ಪಾಪನಾಶ ದೇವಳದಲ್ಲಿ ಶಿವರಾತ್ರಿ ಸಂಭ್ರಮ
ಬೀದರ - ಕರೋನ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಮರೆಯಾಗಿದ್ದ ಭಕ್ತರ ಸಂಭ್ರಮ ಇಂದು ಶಿವರಾತ್ರಿಯ ಸಂದರ್ಭದಲ್ಲಿ ಪಾಪನಾಶ ದೇವಸ್ಥಾನದಲ್ಲಿ ಕಂಡುಬಂದಿತು.ರಾಮ ಲಕ್ಷ್ಮಣರು ವನವಾಸ ಸಂದರ್ಭದಲ್ಲಿ ಬೀದರ್ ನ ಪಾಪನಾಶ ದೇವಸ್ಥಾನಕ್ಕೆ ಭೇಟಿ ನೀಡಿರುವರೆಂಬ ಐತಿಹ್ಯ ಇರುವ ಈ ದೇವಸ್ಥಾನದ ಖ್ಯಾತಿ ಸುತ್ತೆಲ್ಲ ಹರಡಿದ್ದು ಶಿವರಾತ್ರಿಯ ಹಿನ್ನೆಲೆಯಲ್ಲಿ ದೂರದೂರದಿಂದ ಭಕ್ತರು ಬಂದು ಪಾಪನಾಶಕ ಶಿವಲಿಂಗದ ದರ್ಶನ...
ಸುದ್ದಿಗಳು
ಭಾವೈಕ್ಯತೆಗೆ ಅಪಾರ ಕೊಡುಗೆ ನೀಡಿದ ಸೂಫಿ ಸಂತರು
ಈ ದೇಶಕ್ಕೆ ಭಾವೈಕ್ಯತೆಯ ವಿಷಯದಲ್ಲಿ ಸೂಫಿ ಸಂತರ ಕೊಡುಗೆ ಅಪಾರ. ಉದಾಹರಣೆ ಎಂಬಂತೆ ನಾಡಿನಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಕಡೆ ಸೂಫಿ ಸಂತರ ಹಾಗೂ ಶರಣರ ಹೆಸರು ಕೇಳಿ ಬರುತ್ತವೆ. ಅವರ ದರ್ಗಾಗಳು ಶರಣರ ದೇವಾಲಯಗಳು ಇಂದಿಗೂ ಸಾಮರಸ್ಯದ ಭಾವೈಕ್ಯತೆಯ ಕೇಂದ್ರಗಳಾಗಿ ಜನಜನಿತವಾಗಿವೆ.ಹೌದು, ಈ ಮಾತಿಗೊಂದು ದಿವ್ಯ ಸಾಕ್ಷಿ ಗುಲ್ಬರ್ಗಾ...
ಸುದ್ದಿಗಳು
ಮಾನವೀಯತೆಯ ಜೀವನ ಪವಿತ್ರ: ಹಾಸಿಂಪೀರ
ಸಿಂದಗಿ: ಮಾನವೀಯತೆಯ ಜೀವನ ಪಾವನ. ಧರ್ಮ ದಿಂದಲೆ ಮಾನವ ಕುಲ ಉದ್ಧಾರ ಆದ್ದರಿಂದ ಮನುಷ್ಯತ್ವಕ್ಕೆ ಮೌಲ್ಯ ನೀಡಬೇಕು ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಯರಗಲ್ ಬಿ ಕೆ ಗ್ರಾಮದ ಶ್ರೀ ಚಿಕ್ಕಪ್ಪಯ್ಯ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾತೆಯ ಮಹಾಪುರಾಣ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



