spot_img
spot_img

“ಆಜಾದಿಕಾ ಅಮೃತ” ಮಹೋತ್ಸವ ಹಾಗೂ ಕಾನೂನು ಸೇವೆಗಳ ಸಪ್ತಾಹ ಕಾರ್ಯಕ್ರಮ

Must Read

- Advertisement -

ಸವದತ್ತಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ರಲ್ಲಿ ‘ಕಾನೂನು ಸೇವಾ ಪ್ರಾಧಿಕಾರ ಮತ್ತು ಸವದತ್ತಿ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಸ್ವಾತಂತ್ರ್ಯ ದ 75 ವಷ೯ಗಳ ” ಆಜಾದಿ ಕಾ ಅಮೃತ ” ಮಹೋತ್ಸವ ಹಾಗೂ ಕಾನೂನು ಸೇವೆಗಳ ಸಪ್ತಾಹದ ನೆನಪಿಗಾಗಿ ” ಫ್ಯಾನ್ ಇಂಡಿಯಾ ಜಾಗೃತಿ ಮತ್ತು ಔಟ್ರೀಚ್ ಕಾಯ೯ ಕ್ರಮಗಳು ” ಮಂಗಳವಾರ ಜರುಗಿದವು. ಕಾರ್ಯಕ್ರಮವನ್ನು ಎಸ್. ಎಚ್. ಜಾಲಿಕೊಪ್ಪ ವಕೀಲರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭಗಳಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಮಂಜುನಾಥ ನಂದೆನ್ನವರ ವಕೀಲರು ಮಾತನಾಡುತ್ತಾ “ಸೇವಾ ಮನೋಭಾವದಿಂದ ಸಮಾಜಕ್ಕೆ ಹತ್ತಿರವಾಗಬೇಕು, ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅವನ್ನು ತಡೆಯುವ ಕ್ರಮಗಳು ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಸಲಹೆ ಪಡೆಯಬಹುದು.” ಎಂದು ತಿಳಿಸಿದರು. ಉದ್ಘಾಟನಾ ಪರವಾದ ನುಡಿಗಳನ್ನು ಹಿರಿಯ ನ್ಯಾಯವಾದಿಗಳಾದ ಸಂಜೀವ ಹೆಚ್. ಜಾಲಿಕೊಪ್ಪ ಮಾತನಾಡುತ್ತಾ, ” ಮನುಷ್ಯನಿಗೆ ಹುಟ್ಟಿನಿಂದ ಸಾವಿನವರೆಗೆ ಕಾನೂನಿನ ಅವಶ್ಯಕತೆ ಇದ್ದು ಅದರ ಅರಿವು ಅಗತ್ಯ” ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಲ್.ಎನ್ ಗಾಣಿಗೇರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್. ಆರ್. ಪೆಟ್ಲೂರ, ಗುರುಮಾತೆಯರಾದ ಜಿ. ಎಸ್.ಹೊಸಮನಿ,ವ್ಹಿ. ವ್ಹಿ. ಸುಬೇದಾರ್, ಡಿ. ಪಿ. ಪತ್ತಾರ, ಶಿಕ್ಷಕ ಜಿ.ಎಸ್.ಗೋರೋಬಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯ ರಿಂದ ಪ್ರಾರ್ಥನೆ ಜರುಗಿತು ಗುರುಮಾತೆಯರಾದ ಎಚ್. ಆರ್. ನಾಗನೂರು ಸ್ವಾಗತಿಸಿದರು. ಎಚ್. ಆರ್. ಪೆಟ್ಲೂರ್ ನಿರೂಪಿಸಿದರು . ಸಂಸ್ಕೃತ ಶಿಕ್ಷಕ ಎಸ್. ಎಂ. ದೀಕ್ಷಿತ್ ವಂದಿಸಿದರು.

- Advertisement -
- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group