- Advertisement -
ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ ಭೀಮಪ್ಪ ಗಡಾದ ದೇವರಿಗೇ ಚಳ್ಳೆಹಣ್ಣು ತಿನ್ನಿಸಿದ್ದಾರೆ.
ಈ ಮೊದಲು ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಈಗ ಪಕ್ಷೇತರವಾಗಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿಯವರಿಗೂ ದ್ರೋಹ ಮಾಡಿರುವ ಗಡಾದ ಅವರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
- Advertisement -
ಈ ಮೊದಲು ಜೆಡಿಎಸ್ ಪಕ್ಷದಲ್ಲಿ ಇದ್ದ ಗಡಾದ ಅವರು ಅದಕ್ಕೂ ಕೈ ಕೊಟ್ಟು ಕಾಂಗ್ರೆಸ್ ಸೇರಿ ಈಗ ಟಿಕೆಟ್ ಸಿಗದ್ದಕ್ಕೆ ಪಕ್ಷೇತರವಾಗಿ ಸ್ಪರ್ಧಿಸುವ ಮೂಲಕ ಪಕ್ಷಾಂತರ ಎಂಬ ಶಬ್ದದ ಮರ್ಯಾದೆಯನ್ನೇ ತೆಗೆದಿದ್ದಾರೆ ಎಂದು ಮತದಾರರು ಹಾಸ್ಯ ಮಾಡುತ್ತಿದ್ದಾರೆ.
ಚುನಾವಣೆಯ ಪೂರ್ವದಲ್ಲಿಯೇ ಈ ರೀತಿ ಮಾತು ತಪ್ಪಿರುವ ಗಡಾದ ನಾಳೆ ಶಾಸಕರಾದರೆ ನಮಗೇನು ಬೆಲೆ ಸಿಗುತ್ತದೆ ಎಂದು ಅರಭಾವಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ವರದಿ: ಉಮೇಶ ಬೆಳಕೂಡ, ಮೂಡಲಗಿ