Homeಸುದ್ದಿಗಳುಸಚಿವ ಸ್ಥಾನ ಖುಷಿಯಲ್ಲಿ ಬೀದರ್ ಜಿಲ್ಲೆ

ಸಚಿವ ಸ್ಥಾನ ಖುಷಿಯಲ್ಲಿ ಬೀದರ್ ಜಿಲ್ಲೆ

ಬೀದರ – ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವಾಗಲೂ ಗೌರವ ಸಿಗುತ್ತದೆಯೆಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಬೀತುಪಡಿಸಿದ್ದಾರೆ ಎಂದು ನೂತನ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪತ್ನಿ ಹೇಳಿದರು.

ಪ್ರಧಾನಿಯವರು ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದರಿಂದ ಬೀದರನ‌ ಬಿಜೆಪಿ ಕಾರ್ಯಕರ್ತರಲ್ಲಿ ಸಂತೋಷದಿಂದ ಹರ್ಷ ಮನೆಮಾಡಿದ್ದು, ಸಂಸದರ ಧರ್ಮ ಪತ್ನಿ ಅವರಿಂದ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮತಿ ಖೂಬಾ ಅವರು, ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಯಾವಾಗಲೂ ಗೌರವವಿದೆ. ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಏಳು ವರ್ಷಗಳಿಂದ ನಮ್ಮವರು ಮಾಡಿರುವ ಕೆಲಸ ನೋಡಿ ಪ್ರಧಾನಿಯವರು ಇಂದು ಸಚಿವ ಸ್ಥಾನ ನೀಡಿದ್ದಾರೆ ಎಂದರು.

RELATED ARTICLES

Most Popular

error: Content is protected !!
Join WhatsApp Group