Bidar: ಗೋ ಹತ್ಯೆ ತಡೆದ ಶಾಸಕರ ವಿರುದ್ಧ ಎಫ್ಆಯ್ಆರ್ !

Must Read

ಬೀದರ – ಗೋ ಹತ್ಯೆ ನಡೆಯುತ್ತಿದ್ದ ಮನೆಯ ಮೇಲೆ ಶಾಸಕರು ಮತ್ತು ಅವರ ಬೆಂಬಲಿಗರು ದಾಳಿ ಪ್ರಕರಣ ಸಂಬಂಧ ಶಾಸಕ ಶರಣು ಸಲಗರ್ ಸೇರಿ 9 ಜನರ ಮೇಲೆ ಎಫ್ ಆಯ್ಆರ್ ದಾಖಲಾಗಿದೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜುಲೈ 1 ರಂದು ಬಸವಕಲ್ಯಾಣ ಪಟ್ಟಣದ ಹಿರೇಮಠ ಕಾಲೋನಿಯಲ್ಲಿ ಇನಾಮುಲ್ಲಾ ಖಾನ್ ಎಂಬುವವರ ಮನೆಯಲ್ಲಿ ಗೋ ಹತ್ಯೆ ನಡೆಯುತ್ತಿತ್ತು. ಗೋ ಹತ್ಯೆ ನಡೆಯುತ್ತಿದ್ದ ಮನೆಯ ಮೇಲೆ ಶಾಸಕ ಶರಣು ಸಲಗರ್ ಹಾಗೂ ಅವರ ಬೆಂಬಲಿಗರು ದಾಳಿ ಮಾಡಿ ಗೋ ಹತ್ಯೆ ತಡೆದಿದ್ದರು.

ಐದು ದಿನದ ಬಳಿಕ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಾಸಕ ಶರಣು ಸಲಗರ್ ಸೇರಿ 9 ಜನ ಬೆಂಬಲಿಗರ ಮೇಲೆ ಎಫ್ ಐಆರ್ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group