Homeಸುದ್ದಿಗಳುಬಿಜೆಪಿ ಅಧಿಕಾರ ಹಿಡಿಯಲು ಬಿಡಬಾರದು - ಖಂಡ್ರೆ

ಬಿಜೆಪಿ ಅಧಿಕಾರ ಹಿಡಿಯಲು ಬಿಡಬಾರದು – ಖಂಡ್ರೆ

ಬೀದರ: ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ ಬಿಜೆಪಿಯವರು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅಧಿಕಾರ ಹಿಡಿಯಲು ಹೊಂಚು ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಬೀದರನಲ್ಲಿ ಬಿಜೆಪಿ ನಾಯಕರ ವಿರುದ್ಧ ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಅವರು, ಯಾವ ಮಟ್ಟಕ್ಕೆ ಬಿಜೆಪಿ ಪಕ್ಷದ ನಾಯಕರು ಇಳಿಯುತ್ತಾರೆ ಅಂದರೆ ಜನರ ಮತದಾನ ಹಕ್ಕನ್ನು ಕಸಿದುಕೊಳ್ಳುವುದು,  ಅವರ ಮಾಹಿತಿಯನ್ನು ದೋಚುವದು ಮಾಹಿತಿ ಕದಿಯುವುದರ ಮೂಲಕ ಸರ್ಕಾರದಲ್ಲಿ ಇದ್ದುಕೊಂಡು ಒಂದು ಸಂಸ್ಥೆಯ ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು

ಸಾವಿರಾರು ಜನರನ್ನು ಮತದಾನ ದಿಂದ ದೂರ ಇಡಬೇಕು ಎಂದು ಸಂಚು  ಮಾಡುತ್ತಾರೆ.ಪ್ರಜಾಪ್ರಭುತ್ವದಲ್ಲಿ ಇದು ಒಂದು ಕಪ್ಪು ಚುಕ್ಕೆ ಸಂವಿಧಾನದಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯನ್ನು ತೋರುಸುತ್ತದೆ. ಆದರೆ ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಹಿಡಿಯಲು ಬಿಡಬಾರದು ಎಂದು ಖಂಡ್ರೆ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group