ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ, ರಾಜ್ಯ ಮತ್ತು ಕಲ್ಯಾಣ ಕರ್ನಾಟಕ ” ಬಸವ ಪುರಸ್ಕಾರ” ಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.
ಪ್ರಸ್ತುತ 2021 ನೇ ಸಾಲಿನಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯದ ಯಾವುದೇ ರೀತಿಯ ಪುಸ್ತಕಗಳ 2 ಪ್ರತಿಯ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2022 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ವಿಳಾಸ: ಅಧ್ಯಕ್ಷರು. ಶರಣಗೌಡ ಪಾಟೀಲ ಪಾಳಾ , ಶಿವಶರಣ ಸಂಕಿರಣ ಗಂಟೋಜಿ ಅಪಾರ್ಟ್ಮೆಂಟ್ ,3 ನೇ ಮಹಡಿ # B-1 , ಖುಬಾ ಪ್ಲಾಟ್, ನ್ಯಾಯಾಲಯ ರಸ್ತೆ ಕಲಬುರಗಿ 585102
ಹೆಚ್ಚಿನ ಮಾಹಿತಿಗಾಗಿ 9731555117/9741169055