ಹಾಸನ ತಾಲ್ಲೂಕಿನ ಅಂಕಪುರ ಗ್ರಾಮದ ಸಾಹಿತಿ ಬೋರೇಗೌಡರಿಗೆ ರಾಷ್ಟ್ರ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಶಿವಮೊಗ್ಗದಲ್ಲಿ ಏರ್ಪಡಿಸಿದ್ದ *ರಾಷ್ಟ್ರಮಟ್ಟದ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ* ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.
ಬೋರೇಗೌಡರು ಪ್ರತಿನಿತ್ಯ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಬರವಣಿಗೆಯನ್ನು ಮಾಡುತ್ತ ಸಾಧನೆ ಮಾಡುತ್ತಾ ಬಂದಿರುವುದನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಚುಟುಕು, ಮುಕ್ತಕ, ರುಬಾಯಿ, ಹಾಯ್ಕು, ಟಂಕಾ ಷಟ್ಪದಿ, ಗಝಲ್ ಕವನಗಳು,ಛಂಧೋಬದ್ದ ಸಾಹಿತ್ಯದ ವಿವಿದ ಪ್ರಾಕಾರಗಳಲ್ಲಿ ಸಾಹಿತ್ಯ ಸೇವೆಯನ್ನು ನಿರಂತರ ಮಾಡುತ್ತಲೇಯಿದ್ದಾರೆ ಅವರಿಗೆ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯ ಎಂದು ಹಲವಾರು ಸಾಹಿತಿಗಳು ಮತ್ತು ಸಾಹಿತ್ಯ ಬಳಗಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅದರಲ್ಲಿ ಈ ಕೆಳಕಂಡ ವ್ಯಕ್ತಿಗಳು ಪ್ರಮುಖರು ಎನ್.ಎಲ್.ಚನ್ನೇಗೌಡರು ಹಿರಿಯ ಸಾಹಿತಿಗಳು, ಉಡುವಾರೆ ಸುಂದರೇಶ್ ಬರಹಗಾರರ ಬಳಗದ ಜಿಲ್ಲಾಧ್ಯಕ್ಷರು, ಗೊರೂರು ಅನಂತರಾಜು ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಶಿವರಾಮು ಬರಹಗಾರರ ಬಳಗದ ತಾ.ಅಧ್ಯಕ್ಷರು,ಮಾಲಾ ಚೆಲುವನಹಳ್ಳಿ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರು ಮತ್ತು ಹಲವು ಸಾಹಿತ್ಯ ಬಳಗಗಳು ಇವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿವೆ