ಸುದ್ದಿಗಳು

ಧರ್ಮದ ಬದುಕು ಮುಕ್ತಿಗೆ ದಾರಿ; ಶ್ರೀ ಚನ್ನಮಲ್ಲೇಶ್ವರ ಸಾಮೀಜಿ

ಸಿಂದಗಿ: ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಾನವನು ಭಕ್ತಿಗಳನ್ನು ಮರೆಮಾಚಿ ಅಂಧಕಾರದಲ್ಲಿ ಮುಳುಗಿದ್ದಾನೆ. ಮಾನವನ ಬದುಕು ಧರ್ಮದಿಂದ ಸಾಗಿದರೆ ಮುಕ್ತಿ ದೊರೆಯಲು ಸಾಧ್ಯ ಎಂದು ಪರಮ ಪೂಜ್ಯ ಚನ್ನಮಲ್ಲೇಶ್ವರ ಸಾಮೀಜಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭಧ್ರೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಮಹಾ ಪುರಾಣ ಕಾರ್ಯಕ್ರಮದ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಾನವನಾಗಿ...

ಕನ್ನಡವನ್ನು ಉಳಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದು – ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಬೆಂಗಳೂರು - ಸಿರಿಗನ್ನಡ ಮಿತ್ರ ತಂಡದಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ನಶಿಸುತ್ತಿರುವ ಕನ್ನಡ ಉಳಿಸುವ ನಿಟ್ಟಿನಲ್ಲಿ ಪತ್ರಿಕೆಗಳ ಪಾತ್ರ ಹಿರಿದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರತಿಯೊಬ್ಬ ಕನ್ನಡಿಗನೂ ಪ್ರತಿನಿತ್ಯ ಕನಿಷ್ಠ ಒಂದು ಕನ್ನಡ ಪತ್ರಿಕೆಯನ್ನು ಕೊಂಡು ಓದಬೇಕು. ಜ್ಞಾನ ಕಣಜವೆನಿಸಿದ...

ವ್ಯಕ್ತಿಯ ಕೊಲೆ

ಬೀದರ - ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಅಪರಿಚಿತರು ಶವವನ್ನು ದಾರಿ ಬದಿ ಬಿಸಾಕಿ ಹೋಗಿರುವ ಘಟನೆ ವರದಿಯಾಗಿದೆ.ವೀರಣ್ಣ ( ೫೫) ಎಂದು ಕೊಲೆಯಾದ ದುರ್ದೈವಿಯನ್ನು ಗುರುತಿಸಲಾಗಿದೆ. ಜಿಲ್ಲೆಯ ಬಾಲ್ಕಿ ತಾಲೂಕಿನ ಬಾಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಭಾಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಶರಣರ ಬದುಕು ನಮಗೆ ಆದರ್ಶ

ಸಿಂದಗಿ: ಶರಣರ ಬದುಕಿನ ಜೀವನ ನಮಗೆ ಆದರ್ಶ ಎಂದು ಶ್ರೀಶೈಲಪ್ಪಗೌಡ ಪಾಟೀಲ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭಧ್ರೇಶ್ವರ ಜಾತ್ರಾ ವೈಭವ ನಿಮಿತ್ತ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಚರಿತಾಮೃತ ಮಹಾ ಪುರಾಣ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.ದಿನ ನಿತ್ಯದ ಬದುಕಿನ ಹೋರಾಟದಲ್ಲಿ ಮನಸ್ಸಿಗೆ ಆಗುವ ನೋವುಗಳಿಗೆ ದಿವ್ಯ ಔಷಧಿ ಶರಣರ ಚರಿತ್ರೆ...

85 ರ ವೃದ್ಧೆಯ ಮನವೊಲಿಸಿ ವ್ಯಾಕ್ಸಿನ್ ಕೊಡಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ - ಕೊರೋನಾ ಲಸಿಕೆ ಬೇಡವೇ ಬೇಡವೆಂದು ಹಠ ಹಿಡಿದಿದ್ದ ೮೫ ರ ವೃದ್ಧೆಯ ಮನವೊಲಿಸಿದ ಶಾಸಕ ಬಂಡೆಪ್ಪ ಕಾಶೆಂಪೂರ ಅವರು ಆಕೆಗೆ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದಗಿದ್ದಾರೆ.ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಕಾಶೆಂಪೂರ (ಪಿ) ದೇವಸ್ಥಾನದ ಪಕ್ಕದಲ್ಲೇ ಕೊರೊನಾ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯುತ್ತಿರುವುದನ್ನು ಗಮನಿಸಿ ಮಾಜಿ ಸಚಿವ ಬಂಡೆಪ್ಪ ಖಾಶಾಂಪುರ್ ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು...

ಉಗರಗೋಳದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಜಾತ್ರೆ

ಮುನವಳ್ಳಿ: ಸಮೀಪದ ಉಗರಗೋಳ ಗ್ರಾಮದಲ್ಲಿ ಇಷ್ಟಲಿಂಗಾರ್ಚನೆಯ ಅನುಷ್ಠಾನ ಮತ್ತು ಶಿವಯೋಗದಲ್ಲಿ ಉತ್ತುಂಗ ಸಾಧನೆಗೈದ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ತೀಕ ಮಾಸದ ಕೊನೆಯ ಸೋಮವಾರದಂದು (ನವ್ಹೆಂಬರ್-೨೯) ಜರುಗಲಿದೆ.ವೀರಶೈವ ಧರ್ಮದ ಪ್ರಸ್ಥಾನತ್ರಯಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಸೈದ್ಧಾಂತಿಕ ವಿಚಾರಗಳನ್ನು ಸಮಸ್ತ ಭಕ್ತ ಸಮೂಹಕ್ಕೆ ಪ್ರಚುರಪಡಿಸಿ ನಿರಂತರ ಧರ್ಮ ಜಾಗೃತಿಯೊಂದಿಗೆ...

ಸಂವಿಧಾನ ದಿನ ಆಚರಣೆ

ಸವದತ್ತಿ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿಯವರು ಸಂವಿಧಾನ ದಿನದ ಅಂಗವಾಗಿ ಸಂವಿಧಾನದ ಮಹತ್ವದ ಕುರಿತು ತಿಳಿ ಹೇಳಿದರು.ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಹಾಗೂ ನಮಗೆ ಸದಾ ಮಾರ್ಗದರ್ಶಿ.ಇದನ್ನು ಗೌರವಿಸಬೇಕಾದದ್ದು ಪ್ರತಿ ಭಾರತೀಯನ ಕರ್ತವ್ಯ. ನಮ್ಮ ಸಂವಿಧಾನದ ಪೀಠಿಕೆಯು ನಮ್ಮ ಭವ್ಯ ಪರಂಪರೆಯ...

ಸಿಂದೋಗಿ ಸರಕಾರಿ ಪ್ರೌಢಶಾಲೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಮುನವಳ್ಳಿ: ಸಮೀಪದ ಸಿಂದೋಗಿ ಗ್ರಾಮ ಪಂಚಾಯತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೬೫ ಲಕ್ಷ ರೂಪಾಯಿಗಳಲ್ಲಿ ಭೋಜನಾಲಯ,ಆಟದ ಮೈದಾನ,ಸಂಚಾರಪಥ,ಆವರಣ ಗೋಡೆ,ಮಹಾದ್ವಾರ ಗೇಟ್,ಶೌಚಾಲಯ,ಮಳೆ ನೀರು ಕೊಯ್ಲು ಇಂಗುಗುಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತಿಕ್....

ಬೆಳೆ ಹಾನಿಗೆ ಸರ್ಕಾರ ಶೀಘ್ರ ಪರಿಹಾರ ನೀಡಬೇಕು – ಅಶೋಕ ಮನಗೂಳಿ

ಸಿಂದಗಿ; ತಾಲೂಕಿನಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ದ್ರಾಕ್ಷಿ, ಮೆಣಸಿನಕಾಯಿ, ತೊಗರಿ, ಹತ್ತಿ ಸೇರಿದಂತೆ ಅನೇಕ ತೋಟಗಾರಿಕೆ ಹಾಗೂ ಒಣಬೇಸಾಯ ಬೆಳೆಗಳು ಅಪಾರ ಹಾನಿಯಾಗಿದ್ದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಯವರು ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಣ್ಣಗುಡ್ಡಿಹಾಳ, ಹಡಗಿನಾಳ, ಬಸ್ತಿಹಾಳ ಗ್ರಾಮದ  ರೈತರ ಹೊಲಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ದ್ರಾಕ್ಷಿ,...

ಡಾ.ಅಶೋಕ ದಳವಾಯಿಗೆ 4ನೇ ಪಿ.ಎಚ್.ಡಿ

ಮೂಡಲಗಿ: ಹಿರಿಯ ಆಯ್.ಎ.ಎಸ್ ಅಧಿಕಾರಿ ಕೃಷಿ ತಜ್ಞ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕೌಜಲಗಿಯ ಡಾ.ಅಶೋಕ ಎಂ.ದಳವಾಯಿಯವರು ಈಗ 4ನೇ ಬಾರಿ ಪಿ.ಎಚ್.ಡಿ ಪದವಿ ಪಡೆಯಲಿದ್ದಾರೆ.ಓಡಿಸ್ಸಾ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದವರು ದಳವಾಯಿಯವರಿಗೆ ಗೌರವ “ಡಾಕ್ಟರ ಆಫ್ ಸೈನ್ಸ್ ಪದವಿ ಪ್ರದಾನ ಮಾಡುವುದಾಗಿ ತಿಳಿಸಿದ್ದಾರೆ.ಡಿ.18...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group