Homeಸುದ್ದಿಗಳುಸಂಭ್ರಮದ ಶಿವ - ಬಸವ ಜಯಂತಿ

ಸಂಭ್ರಮದ ಶಿವ – ಬಸವ ಜಯಂತಿ

ಗೋಕಾಕ: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದಿಂದ ನಗರದ ವಿವಿಧೆಡೆ ಶಿವ-ಬಸವ ಜಯಂತಿಯನ್ನು ಆಚರಿಸಲಾಯಿತು.

ನಗರದ ಉಪ್ಪಾರ ಗಲ್ಲಿಯ ಹರಿ ಮಂದಿರದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ನಂತರ ಶೂನ್ಯ ಸಂಪಾದನಾ ಮಠದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಗುದಗಗೋಳ, ಗಜಾನನ ಜಾಧವ, ಪ್ರವೀಣ ಚುನಮರಿ, ಗುರು ಬೆನ್ನವಾಡ, ವಿಠ್ಠಲ ಚಿಪ್ಪಲಕಟ್ಟಿ, ನಾಗು ಕಡಕೋಳ, ನಾಮದೇವ ಚಿಕ್ಕೋರ್ಡೆ, ಸಂತೋಷ ಗೋಂದಳಿ, ಮಾರುತಿ ಪೂಜೇರಿ, ಶಶಿಧರ ಬೋರಶೆಟ್ಟಿ,  ಶ್ರೀಕಾಂತ ಮನ್ನವಡ್ಡರ, ಶಿವಲಿಂಗ ಮಾಯಗೊಂಡ, ಸುರೇಶ ಜರತಾರಕರ, ಮಹೇಶ ಬಡೆಪ್ಪಗೋಳ, ಮಂಜುನಾಥ ಘಮಾಣಿ, ಆನಂದ ಮನ್ನವಡ್ಡರ ಸೇರಿದಂತೆ ಅನೇಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group