Homeಸುದ್ದಿಗಳುಇಂದಿನ ಸಮಾಜದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕ - ರಾಕೇಶಕುಮಾರ

ಇಂದಿನ ಸಮಾಜದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯಕ – ರಾಕೇಶಕುಮಾರ

ಯರಗಟ್ಟಿ: ಸರಕಾರಿ ಶಾಲೆಯಲ್ಲಿ ಕಲಿಯುವ ಗ್ರಾಮೀಣ ಮಕ್ಕಳಿಗೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯವಾಗಿದೆ ಎಂದು ಬಾಷ್ ಕಂಪನಿ ಭಾರತ ಸೆಕ್ಯೂರಿಟಿ ಮುಖ್ಯಸ್ಥ ರಾಕೇಶಕುಮಾರ ತ್ರಿಪಾಠಿ ಹೇಳಿದರು.

ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬಾಷ್ ಲಿಮಿಟೆಡ್ ಕಂಪನಿಯಿಂದ ಸುಮಾರು ಹದಿನೈದು ಲಕ್ಷಕ್ಕಿಂತಲೂ ಹೆಚ್ಚಿನ ಹಣದಲ್ಲಿ ಇಪತ್ತು ಕಂಪ್ಯೂಟರ್ ವಿತರಿಸಿ, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಬಳಿಗಾರ ಮಾತನಾಡಿ “ಸರಕಾರಿ ಶಾಲೆಗಳ ಗುಣಾತ್ಮಕ ಶಿಕ್ಷಣದಲ್ಲಿ ಇಂತಹ ಕೊಡುಗೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯರಗಟ್ಟಿ ಶಾಲೆಗೆ ಬಾಷ್ ಕಂಪನಿಯವರು ವಿತರಿಸಿದ ಕಂಪ್ಯೂಟರ್‌ಗಳು ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಸದುಪಯೋಗಪಡಿಸಿಕೊಳ್ಳಲು ಶಿಕ್ಷಕರು ಪ್ರೋತ್ಸಾಹ ನೀಡುವ ಜೊತೆಗೆ ಮಕ್ಕಳ ಸೃಜನಾತ್ಮಕ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ” ಕರೆ ನೀಡಿದರು.

ಪ್ರಕಾಶಗೌಡ ಪಾಟೀಲ ಬಾಷ್ ಕಂಪನಿ ಸೆಕ್ಯೂರಿಟಿ ಅಧಿಕಾರಿ ಮಾತನಾಡಿ “ಬಾಷ್ ಕಂಪನಿಯು ಜರ್ಮನಿ ದೇಶದ ಕಂಪನಿಯಾಗಿದೆ ಭಾರತ ದೇಶದಲ್ಲಿ ಸಾಕಷ್ಟು ಸೋಲಾರ ಪ್ಲಾಂಟ್‌ಗಳನ್ನು ನಿರ್ಮಿಸಿ ಸೋಲಾರ ವಿದ್ಯುತ್ ನೀಡುತ್ತಾ ಬಂದಿದೆ. ಬಾಷ್ ಕಂಪನಿಯು ಸಮಾಜದ ಬಡವರಿಗೆ, ವಿದ್ಯಾರ್ಥಿಗಳಿಗೆ, ಮೂಲಭೂತ ಸೌಕರ್ಯಗಳಿಗೆ ತನ್ನ ಲಾಬಾಂಶದಲ್ಲಿ ಸಾಕಷ್ಟು ಹಣವನ್ನು ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡುತ್ತಿದೆ.” ಎಂದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ ಮಾತನಾಡಿ “ ಬಾಷ್ ಕಂಪನಿಯ ಇತಿಹಾಸವನ್ನು ತಿಳಿಸುತ್ತ ಜಾಗತಿಕವಾಗಿ ಇಂದು ಬಾಷ್ ಕಂಪನಿ ಹೆಸರು ಮಾಡಿದ್ದು ಇಂತಹ ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತ ಬೆಳವಣಿಗೆ ಹೊಂದುತ್ತಿರುವುದು ಶ್ಲಾಘನೀಯ”ಎಂದರು.

ಈ ಸಂಧರ್ಭದಲ್ಲಿ ಬಾಗೋಜಿಕೊಪ್ಪ ಡಾ.ಶಿವಲಿಂಗ ಮುರುಘಾರಾಜೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ “ಇಂದು ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ಸಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿ ಕಂಪ್ಯೂಟರ್ ಲ್ಯಾಬ್.ಡಿಜಿಟಲ್ ಗ್ರಂಥಾಲಯ ಹೊಂದಿದ್ದು ಯರಗಟ್ಟಿಯ ಶಾಲೆಗೆ ಬಾಷ್ ಕಂಪನಿ ಉತ್ತಮ ಕೊಡುಗೆ ನೀಡಿದೆ. ಮುಖ್ಯೋಪಾಧ್ಯಾಯರಾದ ಶಿವಾನಂದ ಮಿಕಲಿಯವರ ಈ ಕಾರ್ಯದಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗೆ ಉತ್ತಮ ಮೆರಗು ಬಂದಿದೆ” ಎಂದು ಆಶೀರ್ವಚನ ನೀಡಿದರು.

ಎಸ್‌ಡಿಎಮ್‌ಸಿ ಅಧ್ಯಕ್ಷೆ ಸೃಷ್ಠಿ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷ ಮಾತನಾಡಿ “ ನಮ್ಮ ಊರ ಶಾಲೆಗೆ ಇಂದು ಬಾಷ್ ಕಂಪನಿಯವರು ನೀಡಿದ ಕಂಪ್ಯೂಟರ್ ಲ್ಯಾಬ್ ಎಲ್ಲ ಶಿಕ್ಷಕ ಶಿಕ್ಷಕಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಮುತುವರ್ಜಿ ವಹಿಸಿ ಪಾಠ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಇದರ ಸದುಪಯೋಗವನ್ನು ನಾವು ಕಾಣಲು ಸಾಧ್ಯವಿದೆ. ನಮ್ಮ ಎಲ್ಲ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಕೂಡ ಈ ದಿಸೆಯಲ್ಲಿ ಎಲ್ಲ ರೀತಿಯ ಸಹಾಯ ಸಹಕಾರ ಒದಗಿಸುತ್ತೇವೆ” ಎಂದು ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಕೆ.ಜಮಾದಾರ ಮಾತನಾಡಿ “ ಜಾಗತಿಕ ಮಟ್ಟದಲ್ಲಿ ಗ್ರಾಹಕರ ಸೇವೆಯಲ್ಲಿ ವಿವಿಧ ಸೇವೆಗಳಲ್ಲಿ ತೊಡಗಿದ ಬಾಷ್ ಕಂಪನಿ ರಾಬರ್ಟ ಬಾಷ್ ಅವರಿಂದ ಸಂಸ್ಥಾಪನೆಗೊಂಡು ವೋಕ್ಮರ ಡೆನ್ನರ್ ಸಿ.ಇ.ಓ ಮೂಲಕ ಜಗತ್ತಿನಾದ್ಯಂತ ಬೆಳೆದು ನಿಂತಿದೆ. ಇಂತಹ ಕಂಪನಿ ಶಾಲೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಒದಗಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ.ನಾವು ಶಿಕ್ಷಣ ನೀಡುವ ಕಾಲಕ್ಕೆ ಇಂತಹ ಅತ್ಯಾಧುನಿಕ ಸೌಲಭ್ಯಗಳು ಇರಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಿಸಿದ ಬಾಷ್ ಕಂಪನಿಯವರಿಗೆ ಧನ್ಯವಾದಗಳು” ಎಂದು ತಿಳಿಸಿದರು.

ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ವಾಲಿ “ ನಮ್ಮ ಊರ ಶಾಲೆ ಇಂದು ಶೈಕ್ಷಣಿಕ ಚಟುವಟಕೆಗಳಲ್ಲಿ ಮುಂದೆ ಬರಲು ಆಧುನಿಕ ತಂತ್ರಜ್ಞಾನ ಶಿಕ್ಷಣ ಒದಗಿಸಲು ಬಾಸ್ಕ ಕಂಪನಿ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.ಈ ಕಂಪನಿಯ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ” ಎಂದು ಬಾಸ್ಕ ಕಂಪನಿಯ ಕಾರ್ಯವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಬಾಸ್ಕ ಕಂಪನಿಯ ಪದಾಧಿಕಾರಿಗಳಿಗೆ ಶಾಲೆಯ ವತಿಯಿಂದ ಗೌರವ ಸನ್ಮಾನ ಜರುಗಿಸಲಾಯಿತು. ಯರಗಟ್ಟಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕೂಡ ಬಾಷ್ ಕಂಪನಿ ಭಾರತ ಸೆಕ್ಯೂರಿಟಿ ಮುಖ್ಯಸ್ಥ ರಾಕೇಶಕುಮಾರ ತ್ರಿಪಾಠಿ. ಬಾಷ್ ಕಂಪನಿ ಸೆಕ್ಯೂರಿಟಿ ಅಧಿಕಾರಿ ಪ್ರಕಾಶಗೌಡ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿ.ಪಂ.ಮಾಜಿ ಸದಸ್ಯ ಅಜೀತಕುಮಾರ ದೇಸಾಯಿ, ಪ.ಪಂ.ಮುಖ್ಯಾಧಿಕಾರಿ ಎಸ್.ಎಸ್.ಗೋರೋಶಿ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಬಳಿಗಾರ, ಬಾಷ್ ಕಂಪನಿಯ ಪ್ರದೀಪ್ ಸಿಂಗ್, ಪ್ರೀತಮ್ ಸಿಂಗ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವೈ.ತುಬಾಕದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಪರಸಗಡ ಪತ್ತಿನ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಎಂ.ಚೀಲದ, ಯರಗಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಿ.ಮಿಕಲಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಕೆ.ಜಮಾದಾರ, ಎನ್.ಕೆ.ಹುಚರಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ರಾಜೇಂದ್ರ ವಾಲಿ, ರಪೀಕ್ ಜಮಾದಾರ, ಎಸ್‌ಡಿಎಮ್‌ಸಿ ಸರ್ವ ಸದಸ್ಯರು, ಶಾಲಾ ಸಿಬ್ಬಂದಿ, ಸಿಆರ್‌ಸಿಗಳು, ಯರಗಟ್ಟಿ ಸೋಲಾರ್ ಪ್ಲಾಂಟ್ ಬಾಷ್ ಲಿಮಿಟೆಡ್ ಕಂಪನಿ ಸಿಬ್ಬಂದಿ ವರ್ಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯ ಮುಂಬಾಗದಲ್ಲಿ ವಿದ್ಯಾರ್ಥಿಗಳು, ಪಾಲಕರು ವಿವಿಧ ಸಂಪನ್ಮೂಲ ಕೇಂದ್ರಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಸ್.ಮಲ್ಲನ್ನವರ (ಮುರಗೋಡ) ರಫೀಕ ಮುರಗೋಡ (ಚಚಡಿ) ಎಸ್.ವ್ಹಿ.ಜಗುನವರ (ತಲ್ಲೂರ) ಎಂ.ಐ.ಮಡಿವಾಳರ (ಶಿವಾಪುರ) ಎಸ್.ಆರ್.ತೋಟಗಿ (ಸತ್ತಿಗೇರಿ) ಎ.ಕೆ.ಮುಳ್ಳೂರ (ಯರಜರ್ವಿ) ಮಹಾಂತೆಶ ಬೋಳೆತ್ತಿನ (ಹೊಸೂರ) ಕನ್ನಡ ಸಾಹಿತ್ಯ ಪರಿಷತ್ ಯರಗಟ್ಟಿ ತಾಲೂಕು ಘಟಕದ ಅಧ್ಯಕ್ಷರಾದ ತಮ್ಮನ್ನ ಕಾಮನ್ನವರ. ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಆಶಾ ಫರೀಟ್. ಯರಗಟ್ಟಿ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಮಹಾಂತೇಶ ಜಕಾತಿ. ನಿವೃತ್ತ ಪ್ರಧಾನ ಗುರುಗಳಾದ ಆರ್.ಬಿ.ಗಾಣಗಿ. ಎಸ್.ಬಿ.ಕರ್ಕಿ. ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ ನೌಕರರ ಸಂಘದ ನಿರ್ದೇಶಕರು ಮತ್ತು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ ಮುಂಡರಗಿ. ಶಿಕ್ಷಕ ಸಾಹಿತಿ ವಿಠ್ಠಲ ದಳವಾಯಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ರಾಜಶೇಖರ ಬಿರಾದಾರ. ಎ.ಬಿ.ಪಾಟೀಲ. ಎಂ.ಕೆ.ಪಾಟೀಲ. ಮಾಧ್ಯಮ ಪ್ರತಿನಿಧಿಗಳಾದ ಸಿದ್ದು ಪೂಜೇರ.ಎಂ.ಎಂ.ವಿರಕ್ತಮಠ.ಕೆ.ಎಪ್.ನದಾಫ್.ಶಿವಾನಂದ ಬಳಿಗಾರ ದೈಹಿಕ ಶಿಕ್ಷಕರಾದ ಎಸ್.ವ್ಹಿ.ಸರದಾರ ಆರ್.ಕೆ.ಹುಣಸಿಕಟ್ಟಿ. ಎ.ಎಂ.ಪೂಜೇರ ಉಪಸ್ಥಿತರಿದ್ದರು. ಶಿಕ್ಷಕ ಎಸ್.ಬಿ.ಪಾಣಿಶೆಟ್ಟಿ ನಿರೂಪಿಸಿದರು, ಗುರುಮಾತೆ ಬಿ.ಐ.ಮಳಗಲಿ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಸಂಗೀತ ರೂಪಕದ ಮೂಲಕ ಸ್ವಾಗತ ಗೀತೆ ಮತ್ತು ಪ್ರಾರ್ಥನೆ ಮೂಡಿ ಬಂದವು. ಶಿಕ್ಷಕ ಆರ್.ಕೆ.ಹುಣಸಿಕಟ್ಟಿ ಸ್ವಾಗತಿಸಿದರು, ಶಿಕ್ಷಕ ಎ.ಎಂ.ಪೂಜೇರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group