ಬೀದರ – ಬಸವಕಲ್ಯಾಣ ನಗರಕ್ಕೆ ನೀರು ಪೂರೈಸುವ ವಾಟರ್ ಮ್ಯಾನ್ ತಾನೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಿ. ೧೮ ರಂದು ಚುಳಕಿ ಡ್ಯಾಮ್ ನಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನಲ್ಲಿರುವ ಮುಸ್ತಾಪೂರ ಡ್ಯಾಮ್ (ಚುಳಕಿ ನಾಲಾ ) ದಲ್ಲಿ ಬಾಲಾಜಿ ( ೩೭) ವರ್ಷ ಸಾ. ಘಾಟಬೋರಾಳ ತಾಂಡಾ Water supply man ಈತನು ನೀರಲ್ಲಿ ಈಜಾಡಲು ಹೋಗಿ ಮುಳಗಿ ಮೃತಪಟ್ಟಿದ್ದು, ಮಧ್ಯಾಹ್ನ ಸಮಯದಲ್ಲಿ ಬೀದರ ಅಗ್ನಿಶಾಮಕ ದಳ ತಂಡದಿಂದ ನೀರಲ್ಲಿ ಮುಳುಗಿರುವ ಆತನನ್ನು ಹೊರಗಡೆ ತೆಗೆದು ಶವವನ್ನು ಮರಣೋತ್ತರ ಪರೀಕ್ಷೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ.