Homeಸುದ್ದಿಗಳುರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು

ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು

ಬೀದರ – ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಗ್ರಾಮದಲ್ಲಿ ಬುಧವಾರ ಸೋಯಾ ರಾಶಿ ಮಾಡುವ ಸಂದರ್ಭದಲ್ಲಿ, ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ವರವಟ್ಟಿ (ಬಿ) ಗ್ರಾಮದ ರೈತ ಮಹಿಳೆಯೊಬ್ಬರು ತನ್ನ ಎರಡು ಎಕರೆ ಹೊಲದಲ್ಲಿ ಬೆಳೆದ ಸೊಯಾ ರಾಶಿಯನ್ನು ಯಂತ್ರಕ್ಕೆ ಹಾಕುವ ಸಂದರ್ಭದಲ್ಲಿ ಅವಳ ಸೀರೆ ಸೆರಗು ಜೊತೆಗೆ ತಲೆಗೆ ಕಟ್ಟಿಕೊಂಡ ಬಟ್ಟೆ ರಾಶಿ ಯಂತ್ರಕ್ಕೆ ಸಿಲುಕಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಗ್ರಾಮದ ಸಂಗೀತಾ ಶ್ರೀಹರಿ ಬಿರಾದಾರ (32) ಮೃತಪಟ್ಟ ರೈತ ಮಹಿಳೆಯಾಗಿದ್ದಾಳೆ.

ಘಟನಾ ಸ್ಥಳಕ್ಕೆ ಉಪ ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯನ್ನು ವೀಕ್ಷಿಸಲು ಬಂದ ಗ್ರಾಮದ ಹೆಣುಮಕ್ಕಳು ಆಕ್ರಂದನ ಮುಗಿಲು ಮುಟ್ಟಿತ್ತು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group