spot_img
spot_img

ಕನ್ನೋಳ್ಳಿ ಸರಕಾರಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

Must Read

- Advertisement -

ಸಿಂದಗಿ: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಾಲೂಕಿನ ಕನ್ನೋಳ್ಳಿ ಗ್ರಾಮದ ಸರಕಾರಿ ಹಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡದೆ ಇರುವುದಕ್ಕೆ ಬದಲಾಗಿ ವಿದ್ಯಾರ್ಥಿಗಳ ಪಾಲಕರಿಗೆ ಬಿಸಿ ಊಟದ

ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವಿ ಮಾತನಾಡಿ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕರು ಅವರಿಗೆ ಕರೆ ಮಾಡಿ ನಿಗದಿತ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಿಸಬೇಕು. ಆಹಾರ ಧಾನ್ಯ ಪಡೆಯಲು ಬಂದಿರುವ ಪಾಲಕರ ಕೈಗೆ ಸೈನೆಟಜರ್ ಮಾಡಿ ಪಾಲಕರಿಗೆ ಮುಖಕ್ಕೆ ಮಾಸ್ಕ ಧರಿಸುವಂತೆ ಶಿಕ್ಷಕರು ವಿನಂತಿ ಮಾಡಿ ಅವರು ಆಹಾರ ಧಾನ್ಯ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿ ಪಾಲಕರು ಸರತಿ ಸಾಲಿನಲ್ಲಿ ನಿಂತು ಕೊಂಡು ತಮ್ಮ ಮಕ್ಕಳ ಆಹಾರ ಧಾನ್ಯ ಸ್ವಿಕರಿಸಬೇಕು ಎಂದು ಸಲಹೆ ನೀಡಿ ಅವರು ಪಾಲಕರಿಗೆ ಬಿಸಿ ಊಟದ ಆಹಾರ ಧಾನ್ಯ ವಿತರಿಸಿದರು.

- Advertisement -

ಶಾಲೆಯ ಗುರುಮಾತೆ ಶ್ರೀಮತಿ ಎಸ್ ಎಚ್ ನಾಯಕ್ , ಶಿಕ್ಷಕಿ ಶ್ರೀಮತಿ ಸವಿತಾ ಬಸವರಾಜ ಕೆಂಭಾವಿ ( ಶಿರವಳಕರ್ ) ಶಿಕ್ಷಕಿ ಶ್ರೀಮತಿ ಎಸ್ ಎಂ ತಾಳಿಕೋಟಿ . ಶ್ರೀ ಜಿ ಬಿ ಲಮಾಣಿ. ಶ್ರೀ ಎಸ್ ಎಂ ಐಗಳಿ . ಎ.ಎಂ. ಮುಲ್ಲಾ ಹಾಗೂ ಬಿಸಿ ಊಟದ ಸಿಬ್ಬಂದಿ ಮತ್ತು
ಪಾಲಕರು ಭಾಗವಹಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group