Homeಸುದ್ದಿಗಳುಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ; ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಲಹೆ

ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ; ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸಲಹೆ

ಸಿಂದಗಿ: ರಾಜ್ಯದ 4 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಸರ್ಕಾರ ಆಯೋಜಿಸಿದ್ದು ಈ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಪ್ರತಿ ಗ್ರಾಮಸ್ಥರ ಮನೆಗೆ ಸರಕಾರಿ ಸೌಲಭ್ಯಗಳು ಬರಬೇಕು ಎಂದು ಗ್ರಾಮ ಒನ್ ಕೇಂದ್ರ ತೆರೆಯಲಾಗುತ್ತಿದೆ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಇದರ ಬಳಕೆ ಮಾಡಿ ಗ್ರಾಮಗಳಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಕಾರಣ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಕರೆ ನೀಡಿದರು.

ತಾಲೂಕಿನ ಮಲಘಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲಘಾಣ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಹಾಗೂ ಗ್ರಾಮ ವಾಸ್ತವ್ಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಹಣಿಯ ತಂತ್ರಾಂಶ ಸೇವೆ ಪ್ರಾರಂಭವಾಗಿದ್ದು ಈ ಸೇವೆ ದೇಶದಲ್ಲಿಯೇ ಮೊದಲು. ಬಿಪಿಎಲ್, ಎಪಿಎಲ್ ಕಾರ್ಡದಾರಿಗೂ ಆರೋಗ್ಯ ಕಾರ್ಡ ಸೌಲಭ್ಯ ಪಡೆದುಕೊಳ್ಳಬಹುದು ಎಲ್ಲರಿಗೂ ಆಯುಷ್ಮಾನ್ ಭಾರತ ಕಾರ್ಡ ಕೊಡಬೇಕು ಎನ್ನುವ ಸರಕಾರದ ಆದೇಶವಿದೆ ಆದರೆ ಜನರು ಈ ಸೌಲಭ್ಯ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಕಾರಣ ಎಲ್ಲರು ನೋಂದಣಿ ಮಾಡಿಕೊಳ್ಳಿ ಇನ್ನೂ ಹೊಲಗಳಿಗೆ ರಸ್ತೆಯ ಸಮಸ್ಯೆ ಬಗ್ಗೆ ಹಲವಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ಅದನ್ನು ಗ್ರಾಮೀಣ ಭಾಗದಲ್ಲಿಯೇ ಇತ್ಯರ್ಥಗೊಳಿಸಬಹುದು ಗ್ರಾಮ ನಕಾಶೆಯಲ್ಲಿದ್ದ ಪ್ರಕಾರ ನಡೆದುಕೊಂಡು ಸಹಬಾಳ್ವೆಯಿಂದ ಸಹಕರಿಸಬೇಕು ಎಂದರು.

ಶಾಸಕ ರಮೇಶ ಭೂಸನೂರ ಮಾತನಾಡಿ, ಜಿಲ್ಲೆಯ ಕಿಲಾರಿ ಎತ್ತುಗಳ ತಳಿ ಅಭಿವೃದ್ಧಿ ಯೋಜನೆ ಸಂವರ್ಧನ ಕೇಂದ್ರ ಸಿಂದಗಿ ಕ್ಷೇತ್ರಕ್ಕೆ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಅಲ್ಲದೆ ಅನೇಕ ಗ್ರಾಮಗಳಲ್ಲಿ ವಿವಿಧ ಪಿಂಚಣಿ ಯೋಜನೆಗಳು ಸ್ಥಗಿತಗೊಂಡಿವೆ ಎನ್ನುವ ಕೂಗು ಕೇಳಿ ಬಂದಿದ್ದು ಪ್ರತಿ ತಿಂಗಳಿಗೊಮ್ಮೆ ಪಿಂಚಣಿ ಅದಾಲತ್ ಹಮ್ಮಿಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ ಅವರು, ಮಲಘಾಣ ಗ್ರಾಮದ ಗ್ರಂಥಾಲಯಕ್ಕೆ ಶಾಸಕರ ಅನುದಾನ ದಲ್ಲಿ ರೂ 5 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಹಳ್ಳಿಗಳ ಅಭಿವೃದ್ಧಿ ಅದು ದೇಶದ ಅಭಿವೃದ್ಧಿ ಎಂದರು.

ಇಂಡಿ ಉಪವಿಭಾಗಾಧಿಕಾರಿ ಎಂ.ಎನ್.ಚೋರಗಸ್ತಿ ಮಾತನಾಡಿ, ಮಲಘಾಣ 53, ಸೋಮಜಾಳ 5, ಜಟ್ನಾಳ 3, ಆಸಂಗಿಹಾಳ 5 ಅರ್ಜಿಗಳು ಸೇರಿದಂತೆ ಒಟ್ಟು 76 ಅರ್ಜಿಗಳು ಬಂದಿದ್ದು ಅದರಲ್ಲಿ 12 ಅರ್ಜಿಗೆ ಪರಿಹಾರ ಕಲ್ಪಿಸಿ ಇನ್ನುಳಿದ ಸಮಸ್ಯೆಗಳನ್ನು ಸರಕಾರ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

ರೈತರ ಪರವಾಗಿ ಸಿದ್ರಾಮಪ್ಪ ರಂಜುಣಗಿ ಮಾತನಾಡಿ, ಈ ಬಾರಿ ರೈತರ ಕಬ್ಬು ಉಳಿಯದಂತೆ ನೋಡಿಕೊಳ್ಳಿ ರೈತ ಪ್ರತಿಯೊಂದಕ್ಕೂ ಹೋರಾಟ ಮಾಡಿ ಪಡೆದುಕೊಳ್ಳೋದು ಯಾವ ನ್ಯಾಯ. ಕಬ್ಬು ಉಳಿದರೆ ನ್ಯಾಯಾಲಯದ ಮೊರೆ ಹೋಗಬೇಕಾದೀತು ಎಚ್ಚರಿಕೆ ನೀಡಿದರು.

ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಅದಕ್ಕೆ ಕೀಟಬಾಧೆ,ತಗಲುವ ರೋಗಗಳು ಬಗ್ಗೆ ಮಾತನಾಡಿದರು

ಪಶುಸಂಗೋಪನೆ ಇಲಾಖೆ ಡಿ ಡಿ ಪ್ರಾಣೇಶ ಜಹಾಗಿರದಾರ ಪಶುಸಂಗೋಪನೆ ವಿಷಯದ ಕುರಿತು ಮಾತನಾಡಿ, ದಿನೆ ದಿನೆ ಗೋವುಗಳನ್ನು ಕಸಾಯಿ ಖಾನೆಗೆ ದೂಡುತ್ತಿರುವ ಬಗ್ಗೆ ಅನೇಕ ವರದಿಗಳು ಬರುತ್ತಿದ್ದು ಕಾರಣ “ಗೋ ಸಂಪತ್ತನ್ನು ಸಂರಕ್ಷಿಸಿ ಸಂಸ್ಕೃತಿ ಉಳಿಸಿ” ಎಂದು ಮನವಿ ಮಾಡಿಕೊಂಡರು.

ನಂತರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಗ್ರಾಮ ಸಂಚಾರ ಮಲಘಾಣ, ಮಂಗಳೂರು ಅಸಂಗಿಹಾಳ ಗ್ರಾಮಗಳ ಸರಕಾರಿ ಉರ್ದು ಪ್ರೌಢಶಾಲೆ ಮಲಘಾಣ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಂವಾದ ನಡೆಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು, ತೋಟಗಾರಿಕೆ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಂದ ಕೊಂದು ಕೊರತೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟರು.

ಪ್ರೊಬೇಶನರಿ ಐಎಎಸ್ ಅಧಿಕಾರಿ ರಿಷಿ ಆನಂದ, ಡಿವೈಎಸ್‍ಪಿ ಶ್ರೀಧರ ದಡ್ಡಿ, ಜಿಲ್ಲಾ ಪಂಚಾಯತ ಸಿಇಓ ರಾಹುಲ ಸಿಂಧೆ, ಗ್ರಾಪಂ ಅದ್ಯಕ್ಷೆ ಕಾಶೀಬಾಯಿ ಜಾಧವ, ತಾಪಂ ಆಡಳಿತಾಧಿಕಾರಿ ನಿಂಗಣ್ಣ ಗೋಠೆ ವೇದಿಕೆ ಮೇಲಿದ್ದರು.

ಶ್ರೀ ಶರಣಬಸವೇಶ್ವರ ಪಪೂ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ತಹಶೀಲ್ದಾರ ಬಸಯ್ಯ ಮಠ ಹಾಗೂ ಮುರಳಿ ಹೊಸಮನಿ ರೈತಗೀತೆ ಹಾಡಿದರು. ನಿಂಗಣ್ಣ ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group