ಶಿಕ್ಷಣ ಅದಾಲತ್ ಕಾರ್ಯಕ್ರಮ

Must Read

ಸವದತ್ತಿ:  ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದಿ. 04 -11- 2023 ರಂದು ಶಾಲಾ ಶಿಕ್ಷಣ  ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅದಾಲತ್ ನಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಮೋಹನ ದಂಡಿನರವರ ನೇತೃತ್ವದಲ್ಲಿ ಸವದತ್ತಿ ತಾಲೂಕಿನ ಶಿಕ್ಷಕರ 22 ಅರ್ಜಿಗಳನ್ನು ಇತ್ಯರ್ಥಪಡಿಸಿ ಸೂಕ್ತ ಕ್ರಮ ವಹಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ಇಲಾಖೆ ಆಶಯದಂತೆ ಶಿಕ್ಷಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ  ಸವದತ್ತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ , ಜಿಲ್ಲಾ ಉಪಾಧ್ಯಕ್ಷ ರಾದ ಎಮ್. ಎಫ್. ಸಿದ್ದನಗೌಡರ ಸವದತ್ತಿ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಅಧ್ಯಕ್ಷರಾದ  ಸುಧೀರ್  ಎಸ್.ವಾಗೇರಿ . ಪತ್ರಾಂಕಿತ ವ್ಯವಸ್ಥಾಪಕರಾದ ಐ. ಎಂ. ಮಕಾನದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಣ ಸಂಯೋಜಕರಾದ ಜಿ.ಎಂ.ಕರಾಳೆ ಸ್ವಾಗತಿಸಿದರು. ಎಂ ಡಿ ಹುದ್ಧಾರ ನಿರೂಪಿಸಿದರು ಕೊನೆಗೆ ಬಿ ಎಂ ಮಾಳಗಿ ವಂದಿಸಿದರು

Latest News

ಸಂವಿಧಾನದ ಅಡಿಯಲ್ಲಿ ಭ್ರಾತೃತ್ವ ಕಟ್ಟಿಕೊಂಡಿದ್ದೇವೆ – ವಿಠ್ಠಲ ಕುಳ್ಳೂರ

ಸಿಂದಗಿ; ಭಾರತವು ಲಿಖಿತ ಸಂವಿಧಾನ ಹೊಂದಿದ್ದು, ಎಲ್ಲಾ ವರ್ಗ, ಪಂಥದವರು ಇದರ ಅಡಿಯಲ್ಲೇ ಕಾನೂನು, ನಿಯಮ, ಕರ್ತವ್ಯ, ಜವಾಬ್ದಾರಿಯ, ಸಮಾನತೆ, ಭ್ರಾತೃತ್ವದಿಂದ ಪ್ರತಿ ಭಾರತೀಯರು ಇದರ...

More Articles Like This

error: Content is protected !!
Join WhatsApp Group