spot_img
spot_img

ಗಾಂಜಾ ಗ್ಯಾಂಗ್ ಹಿಡಿಲು ಹೋಗಿದ್ದ ಸಿಪಿಐ ಮೇಲೆ‌ ಮಾರಣಾಂತಿಕ ಹಲ್ಲೆ

Must Read

spot_img
- Advertisement -

ಬೀದರ – ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಹಿಡಿಯಲು ಹೋದ  ಸಿಪಿಐ ಅವರ ಮೇಲೆಯೇ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದು ಈ ಸಂಬಂಧ 31 ಆರೋಪಿಗಳನ್ನು ಬಂಧಿಸಲಾಗಿದೆ.

ಹಲ್ಲೆ ಮಾಡಿ ಸಿಪಿಐಯವರಿಂದ ಗಾಂಜಾ ಗ್ಯಾಂಗ್ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ದೋಚಿ ಪರಾರಿಯಾಗಿತ್ತು.

ಈಗ ಬಂಧಿತ ಆರೋಪಿಗಳಿಂದ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ಸ್ವಾಧಿನಪಡಿಸಿಕೊಳ್ಳುವಲ್ಲಿ  ನಮ್ಮ ಟೀಂ ಯಶಸ್ವಿಯಾಗಿದೆ ಎಂಬುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ಹಲ್ಲೆ ಮಾಡಿದ ಬಳಿಕ ಆರೋಪಿಗಳು ಮಹಾರಾಷ್ಟ್ರದ ಮುಂಬೈ, ಲಾಥೂರ್, ಉಮರ್ಗಾ, ಪುಣೆ ಕಡೆಗೆ ಪರಾರಿಯಾಗಿದ್ದರು.

ನಮ್ಮ ಪೊಲೀಸ್ ಟೀಂಗಳು ಆ ಪ್ರದೇಶಗಳಿಗೆ ಹೋಗಿ 31 ಜನ ಆರೋಪಿಗಳನ್ನು ಬಂಧಿಸಿವೆ. ಸಾಯಿಬಣ್ಣ ಚಿಂಚೋಳಿ, ಚಂದ್ರಕಾಂತ, ಹನುಮಂತ  ಪ್ರಮುಖ ಆರೋಪಿಗಳಾಗಿದ್ದಾರೆ. ಅಂದಾಜು 40 ರಿಂದ 50 ಆರೋಪಿಗಳಲ್ಲಿ 31 ಆರೋಪಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

- Advertisement -

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ವರಿಷ್ಠಾಧಿಕಾರಿಗಳು ಗೌರವ ಧನ ನೀಡಿ ಪ್ರಶಂಸಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ,ಬೀದರ

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group