spot_img
spot_img

ಗಾಂಜಾ ಗ್ಯಾಂಗ್ ಹಿಡಿಲು ಹೋಗಿದ್ದ ಸಿಪಿಐ ಮೇಲೆ‌ ಮಾರಣಾಂತಿಕ ಹಲ್ಲೆ

Must Read

- Advertisement -

ಬೀದರ – ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಹಿಡಿಯಲು ಹೋದ  ಸಿಪಿಐ ಅವರ ಮೇಲೆಯೇ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದು ಈ ಸಂಬಂಧ 31 ಆರೋಪಿಗಳನ್ನು ಬಂಧಿಸಲಾಗಿದೆ.

ಹಲ್ಲೆ ಮಾಡಿ ಸಿಪಿಐಯವರಿಂದ ಗಾಂಜಾ ಗ್ಯಾಂಗ್ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ದೋಚಿ ಪರಾರಿಯಾಗಿತ್ತು.

ಈಗ ಬಂಧಿತ ಆರೋಪಿಗಳಿಂದ ಲೋಡೆಡ್ ಪಿಸ್ತೂಲ್, ಮೊಬೈಲ್, ಹಣ, ಬಂಗಾರದ ಚೈನ್, ಎರಡು ಬಂಗಾರದ ರಿಂಗ್ ಸ್ವಾಧಿನಪಡಿಸಿಕೊಳ್ಳುವಲ್ಲಿ  ನಮ್ಮ ಟೀಂ ಯಶಸ್ವಿಯಾಗಿದೆ ಎಂಬುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ಹಲ್ಲೆ ಮಾಡಿದ ಬಳಿಕ ಆರೋಪಿಗಳು ಮಹಾರಾಷ್ಟ್ರದ ಮುಂಬೈ, ಲಾಥೂರ್, ಉಮರ್ಗಾ, ಪುಣೆ ಕಡೆಗೆ ಪರಾರಿಯಾಗಿದ್ದರು.

ನಮ್ಮ ಪೊಲೀಸ್ ಟೀಂಗಳು ಆ ಪ್ರದೇಶಗಳಿಗೆ ಹೋಗಿ 31 ಜನ ಆರೋಪಿಗಳನ್ನು ಬಂಧಿಸಿವೆ. ಸಾಯಿಬಣ್ಣ ಚಿಂಚೋಳಿ, ಚಂದ್ರಕಾಂತ, ಹನುಮಂತ  ಪ್ರಮುಖ ಆರೋಪಿಗಳಾಗಿದ್ದಾರೆ. ಅಂದಾಜು 40 ರಿಂದ 50 ಆರೋಪಿಗಳಲ್ಲಿ 31 ಆರೋಪಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

- Advertisement -

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರಿಗೆ ವರಿಷ್ಠಾಧಿಕಾರಿಗಳು ಗೌರವ ಧನ ನೀಡಿ ಪ್ರಶಂಸಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ,ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group