ಮೂಡಲಗಿ – ವಿದೇಶ ಪ್ರಯಾಣ ಮಾಡಿ ಮರಳಿರುವ ಬೆಳಗಾವಿ ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ ಅವರಿಗೆ ಮೂಡಲಗಿ ತಾಲೂಕಾ ಪಂಚಮಸಾಲಿ ಘಟಕದ ವತಿಯಿಂದ ನಗರದ ದಿ ಮೂಡಲಗಿ ಕೋ ಆಪ್ ಬ್ಯಾಂಕಿನಲ್ಲಿ ಸನ್ಮಾನ ಮಾಡಲಾಯಿತು.
ಡೆನ್ಮಾರ್ಕ್, ನಾರ್ವೆ, ಜರ್ಮನ್, ಐಸ್ ಲ್ಯಾಂಡ್, ಪ್ಯಾರಿಸ್ (ಪ್ರಾನ್ಸ್) ಮತ್ತು ದುಬೈ ಈ ಎಲ್ಲ ದೇಶಗಳನ್ನು ಸುಖಕರ ಪ್ರಯಾಣ ಮಾಡಿ ಬಂದಿರುವ ಸುಭಾಸ ಢವಳೇಶ್ವರ ಅವರಿಗೆ ಪಂಚಮಸಾಲಿ ಮುಖಂಡರು ಗೌರವದ ಸನ್ಮಾನ ಮಾಡಿದರು.
ಬೆಳಗಾವಿ ಜಿಲ್ಲಾ ಪಂಚಮಸಾಲಿ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ, ಮೂಡಲಗಿ ತಾಲೂಕಾ ಪಂಚಮಸಾಲಿ ಅಧ್ಯಕ್ಷರು ಬಸವರಾಜ ಪಾಟೀಲ, ಪಂಚಮಸಾಲಿ ಮುಖಂಡರು ಶಿವಬಸು ಖಾನಟ್ಟಿ, ಮೂಡಲಗಿ ಘಟಕದ ಪಂಚಮಸಾಲಿ ಅಧ್ಯಕ್ಷರು ಬಸವರಾಜ ರಂಗಾಪೂರ, ಯುವ ಘಟಕದ ಅಧ್ಯಕ್ಷರು ಸಂಗಮೇಶ ಕೌಜಲಗಿ,ಶಿವಾನಂದ ಢವಳೇಶ್ವರ, ಪುರಸಭೆ ಸದಸ್ಯರು ಶಿವಾನಂದ ಚಂಡಕಿ, ಶಿವಬಸು ನಿಪನಾಳ, ಶ್ರೀಶೈಲ ಬಳಿಗಾರ,ರೇವಪ್ಪ ಕೋರಿಶಟ್ಟಿ,ಸದಾಶಿವ ನಿಡಗುಂದಿ, ಮಹಾದೇವ ಗೋಕಾಕ,ಸುಭಾಸ ಕಡಾಡಿ, ಚಂದ್ರು ದರೂರ,ರವಿ ಬಾಗೋಜಿ ಇನ್ನು ಅನೇಕರು ಉಪಸ್ಥಿತರಿದ್ದರು.