ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1600ಕೆಜಿ ಗಾಂಜಾ ಜಪ್ತಿ

Must Read

ಬೀದರ: ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಂಬಂತೆ ಒಂದು ಲಾರಿ ಲೋಡ್ ಗಾಂಜಾವನ್ನು ಸ್ಥಳೀಯ ಪೊಲೀಸ್ ಇಲಾಖೆ ಗೆ ಮಾಹಿತಿ ಕೊಡದೇ  ಕೇಂದ್ರ ಸರ್ಕಾರದ ತಂಡ NCB (narcotics control bureau Bangalore)ಜಿಲ್ಲೆ ಔರಾದ ನಲ್ಲಿ ಭರ್ಜರಿ ಭೇಟೆಯಾಡಿದೆ.

ಲಾರಿ ನಂಬರ್ TS-07 UL-0972 ನೇದ್ದರಲ್ಲಿ ಒರಿಸ್ಸಾದಿಂದ ವಾಯಾ ಕರ್ನಾಟಕ ಮುಖಾಂತರ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ NCB(narcotics contral bureau-bangalore) ಕೇಂದ್ರ ಸರ್ಕಾರದ ತಂಡದವರು ಲಾರಿಯನ್ನು ಜಪ್ತಿ ಮಾಡಿ ಭರ್ಜರಿ ಭೇಟೆ ಆಡಿದ್ದಾರೆ.

NCB ತಂಡ ಪರಿಶೀಲಿಸಿದಾಗ ಲಾರಿಯಲ್ಲಿ ಸುಮಾರು 1600 ಕೆಜಿ ಅಕ್ರಮ ಗಾಂಜಾ ಪಾಕೆಟ್ಟುಗಳು ಕಂಡುಬಂದಿದ್ದು ಸದರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಲಾರಿಯ ಡ್ರೈವರ್, ಕ್ಲೀನರ್ ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿರುತ್ತಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group