spot_img
spot_img

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಸ್ನೇಹಿತೆಯರು

Must Read

spot_img
- Advertisement -

ಬೀದರ: ಗ್ರಾಮದ ಪಕ್ಕದಲ್ಲೆ‌ ಇದ್ದ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಬಾಲಕಿಯರು ಬಟ್ಟೆ ತೊಳೆದ ಬಳಿಕ ಸ್ನಾನ ಮಾಡಲು ನೀರಿಗೆ ಇಳಿದಿದ್ದರಿಂದ ನೀರು ಪಾಲಾದ ದುರ್ಘಟನೆ ಬಸವಕಲ್ಯಾಣದ ಪುಲ್ದರ್ ವಾಡಿಯಲ್ಲಿ ನಡೆದಿದೆ.

ಸಕುಬಾಯಿ (16), ಚಾಂದನಿ (16) ಮೃತ ದುರ್ದೈವಿಗಳು. ಇವರು ಚಿಟ್ಟಾ (ಕೆ) ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ‌ಮಾಡುತ್ತಿದ್ದರೆನ್ನಲಾಗಿದೆ.

ಇತ್ತೀಚೆಗೆ ಕೆರೆ ಹೂಳು ಎತ್ತಿದ ಪರಿಣಾಮ ಆಳ ಹೆಚ್ಚಾಗಿತ್ತು. ಈಜಲೆಂದು ನೀರಿಗೆ ಇಳಿದ ಸ್ನೇಹಿತೆಯರು ಆಳ ನೀರಲ್ಲಿ‌ ಮುಳುಗಿ‌ ಸಾವನ್ನಪ್ಪಿದ್ದಾರೆ. ಬಾಲಕಿಯರ ಸಾವಿಗೆ ಇಡೀ ಹಳ್ಳಿಯಲ್ಲಿ ಶೋಕದ ವಾತಾವರಣ ಉಂಟಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

ಮಂಠಾಳ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group