ಬೀದರ – ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ರಾತ್ರಿಯೆಲ್ಲ ಅನವರತ ಸುರಿದ ಮಳೆಯಿಂದ ಹುಲಸುರ್ ಮತ್ತು ಔರಾದ ಹೋಗುವ ಆಣೆಕಟ್ಟು ಮಳೆ ರಭಸಕ್ಕೆ ಮುರಿದು ಹೋಗಿದೆ. ಹಾಗೂ ಭಾಲ್ಕಿ ತಾಲ್ಲೂಕಿನ ಕೆಲವು ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಉಚ್ಚಾ, ನಾವದಗಿ ಗ್ರಾಮಕ್ಕೆ ಮಳೆ ನುಗ್ಗಿದ್ದು, ಮನೆಗಳು ಮುಳುಗಿ ಹೋಗಿವೆ. ಕೆಲವು ಮನೆಗಳು ಅರ್ಧದಷ್ಟು ಮುಳುಗಿದ್ದು ಮನೆಯಿಂದ ಹೊರಗೆ ಬಾರದೆ ಜನ ಪರದಾಡುವಂತಾಗಿದೆ. ಭಾರೀ ಮಳೆಯಿಂದಾಗಿ ಊರಿಗೆ ನುಗ್ಗಿದ ನೀರು ರಸ್ತೆಗಳೆಲ್ಲಾ ಜಲಾವೃತವಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಬರುವ ಅನೇಕ ಗ್ರಾಮಗಳ ಹೊಲ ಗದ್ದೆಗಳಲ್ಲಿ ರೈತರು ಬೆಳೆದ ಬೆಳೆ ಕೈ ಬಾರದೆ ನೀರು ಪಾಲು ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.