ವಿಜಯಪುರ ಜಿಲ್ಲಾ ಉಪ ನಿರ್ದೇಶಕರು/ಜಿಲ್ಲಾ ಸಂಖ್ಯಾಧಿಕಾರಿಗಳಾಗಿ, ಸುಮಾರು ೩೮ ವರ್ಷಗಳು ಸೇವೆಸಲ್ಲಿಸಿ, ಇತ್ತೀಚಿಗೆ ನಿವೃತ್ತರಾದ ಆರ್. ಬಿ. ಬನಶಂಕರಿ ಅವರನ್ನು ರಾಮತೀರ್ಥ ನಗರ ಗೆಳೆಯರ ಬಳಗದ ಸದಸ್ಯರು ಅವರ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿ ಸತ್ಕರಿಸಿದರು.
ಸಮಾರಂಭದಲ್ಲಿ ನಿವೃತ್ತ ಉಪ ನಿರ್ದೇಶಕರಾದ ಸ. ರಾ. ಸುಳಕೂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಜುಗತಿ, ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಧಿಕಾರಿಗಳಾದ ಮಾಳಪ್ಪ ಕೆ. ಜಮಖಂಡಿ, ವಿಶ್ರಾಂತ ಪ್ರಧಾನ ಗುರುಗಳಾದ ಅಶೋಕ ಉಳ್ಳೇಗಡ್ಡಿ ಹಾಗೂ ವಿಶ್ರಾಂತ ಆರಕ್ಷಕ ಅಧಿಕಾರಿ ಬಿ. ವ್ಹಾಯ್. ವೆಂಕನ್ನವರ ಅವರು ಉಪಸ್ಥಿತರಿದ್ದರು.