Homeಸುದ್ದಿಗಳುನಾನು ಟಿಕೆಟ್ ಮಾರಿಕೊಂಡಿಲ್ಲ - ಅಶೋಕ ಖೇಣಿ

ನಾನು ಟಿಕೆಟ್ ಮಾರಿಕೊಂಡಿಲ್ಲ – ಅಶೋಕ ಖೇಣಿ

ಬೀದರ: ಅಶೋಕ್ ಖೇಣಿಗೆ ಕಾಂಗ್ರೆಸ್ ಟಿಕೆಟ್‌ ಮಾರಿಕೊಂಡಿದೆ ಎಂಬ ಚಂದ್ರಾಸಿಂಗ್ ಆರೋಪ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಶೋಕ ಖೇಣಿ, ಟಿಕೆಟ್ ಮಾರಿಕೊಂಡ ವಿಡಿಯೋ ಇದ್ರೆ ನಾನು ತಲೆಬೋಳಿಸಿಕೊಂಡು ರಾಜೀನಾಮೆ ನೀಡುತ್ತೇನೆ ಎಂದರು.

ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಡನೆ ಮಾತನಾಡಿದ ಅವರು, ನನ್ನ ಟಿಕೆಟ್ ಖರೀದಿ ಮಾಡೋ ನೇಚರ್ ಇದೆಯಾ ಎಂದು ಪ್ರಶ್ನೆ ಮಾಡಿದರು.

ನನಗೆ ಟಿಕೆಟ್ ಸಿಕಿದ್ದಕ್ಕೆ ಚಂದ್ರಾಸಿಂಗ್ ಅಪ್ ಸೆಟ್ಟಾಗಿದ್ದಾರೆ.ಅವರ ಜೊತೆ ಮಾತನಾಡಿ ಸಮಾಧಾನ ಮಾಡುತ್ತೇನೆ. ಅವರು ಯುವಕರಿದ್ದು ಅವರಿಗೆ ಭವಿಷ್ಯವಿದೆ. ಬೀದರ ಅನ್ನು ಸಿಂಗಾಪೂರ ಮಾಡುತ್ತೇನೆ ಅಂತ ನಾನು ಯಾರಿಗೆ ಹೇಳಿದ್ದೆನೆ‌ ಅವರನ್ನು  ತೋರಿಸಿ ನಾನು ಒಂದು ಕೋಟಿ ಕೋಡುತ್ತೇನೆ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಟ್ಟು ಬಿಡಿ ಎಂದ ಅವರು, ಕೆಲವರು ಟಿಆರ್ ಪಿಗಾಗಿ ಈ ರೀತಿ ಮಾಡುತ್ತಾರೆ, ಇದು ತಪ್ಪು ಎಂದು ಮಾಧ್ಯಮಗಳ ವಿರುದ್ದ ಗರಂ ಆದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group