ತಿರುಳ್ಗನ್ನಡ ನಾಡಿನ ಹೆಸರಾಂತ ಮಕ್ಕಳ ಸಾಹಿತಿ, ‘ಸತ್ಯಾರ್ಥಿ’ ಕಾವ್ಯನಾಮ ದಿಂದ ಜನಜನಿತರಾಗಿದ್ದ ಶ್ರೀ ಚನ್ನಬಸಪ್ಪ ಹೊಸಮನಿಯವರು ಬೈಲಹೊಂಗಲದಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆ ಮಕ್ಕಳ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ತಮ್ಮ ‘ಅನ್ನದಾತ ‘ಕವನದಿಂದ ರೈತನ ಹಿರಿಮೆಯನ್ನು ಎತ್ತಿಹಿಡಿದು ಮಕ್ಕಳಿಗೂ ಸಹ ರೈತನ ಬಗ್ಗೆ ಹೆಮ್ಮೆ ಬರುವಂತೆ ಮಾಡಿದ್ದು ಮತ್ತು ಈ ಕವನ ಹಲವು ದಶಕಗಳ ಕಾಲ ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಕಲಿಕಾ ಕವನವಾಗಿ ಇತ್ತು. ಹೀಗೆ ಹಲವಾರು ಆಯಾಮಗಳಲ್ಲಿ ಮಕ್ಕಳಿಗೆ ಜ್ಞಾನವನ್ನು ಒದಗಿಸುವ ಉಪಯುಕ್ತ ಸಾಹಿತ್ಯವನ್ನು ಉಣಬಡಿಸಿದ್ದು, ಇದೀಗ ಅವರ ಅಗಲಿಕೆಯಿಂದ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶಿಯನ್ನು ಕಳೆದುಕೊಂಡಂತಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡರವರು ಹೊಸಮನಿಯವರ ಕಾವ್ಯ ಕೃಷಿಯನ್ನು ನೆನೆದು ಕಂಬನಿ ಮಿಡಿದಿದ್ದಾರೆ.
ಸಾಹಿತಿ ಸತ್ಯಾರ್ಥಿ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
0
504
Previous article
RELATED ARTICLES