- Advertisement -
ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸ್ವಾಮಿ ವಿವೇಕಾನಂದ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಉದ್ಘಾಟನಾ ಸಮಾರಂಭವು ಜ.27 ರಂದು ಮುಂಜಾನೆ 9ಕ್ಕೆ ಪಟ್ಟಣದ ಅಮನ್ ನಗರದಲ್ಲಿನ ಥರಥರಿ ಕಟ್ಟಡದಲ್ಲಿ ಜರುಗಲಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಶಿವಶಂಕರ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಪಟ್ಟಣದ ದತ್ತಾತ್ರಯಬೋಧ ಶ್ರೀಗಳು, ಶ್ರೀಧರಬೋಧ ಶ್ರೀಗಳು, ಮುನ್ಯಾಳ-ರಂಗಾಪೂರದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ಸುಣಧೋಳಿಯ ಶಿವಾನಂದ ಶ್ರೀಗಳು ಮತ್ತು ರಂಗಾಪೂರದ ಶರಣ ಲಕ್ಕಪ್ಪ ಶರಣರು ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಭಾಗವಹಿಸುವರು.