Homeಸುದ್ದಿಗಳುಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ - ಈರಣ್ಣ ಕಡಾಡಿ

ಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ – ಈರಣ್ಣ ಕಡಾಡಿ

ಮೂಡಲಗಿ – ಭಾರತ ಈಗ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದೆ. ಸೈನಿಕರಿಗೆ ಸೌಲಭ್ಯಗಳು, ದೂರವಾಣಿ ಸೌಲಭ್ಯಗಳು, ಆಹಾರದಲ್ಲಿ ಸ್ವಾವಲಂಬನೆ,ಕ್ರೀಡೆ, ವಿಮಾನಯಾನ, ಅಂತರಿಕ್ಷ ಕ್ಷೇತ್ರ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ವೈದ್ಯಕೀಯ ಸೌಲಭ್ಯ….ಮುಂತಾದ ಕ್ಷೇತ್ರಗಳಲ್ಲಿ ಈಗ ಭಾರತ ಮುಂಚೂಣಿಯಲ್ಲಿದೆ. ಕೋವಿಡ್ ಲಸಿಕೆಯನ್ನು ಕಂಡುಹಿಡಿದ ಮೊದಲ ದೇಶ ಭಾರತ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು

ಮೂಡಲಗಿಯ ಗಾಂಧಿ ಚೌಕದಲ್ಲಿ ೭೫ ನೇ ಸ್ವಾತಂತ್ರ್ಯೋತ್ಸ ವಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮೂಡಲಗಿ ತಹಶೀಲ್ದಾರ ಡಿ ಜೆ ಮಹಾತ್ ಧ್ವಜಾರೋಹಣ ಮಾಡಿದರು

ವ್ಯಾಪಾರಕ್ಕೆಂದು ಬಂದ ಡಚ್ಚರು, ಪೋರ್ಚುಗೀಸರು ನಂತರ ಬ್ರಿಟೀಷರು ದೇಶವನ್ನೇ ಆಳತೊಡಗಿದರು. ಇವರೆಲ್ಲ ತಲೆಮಾರುಗಳವರೆಗೆ ಭಾರತವನ್ನು ಆಳಿದರು. ಮಹಾತ್ಮಾ ಗಾಂಧಿಯವರು ಬಂದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ಸಿಕ್ಕಿತು ಎಂದು ಅವರು ಹೇಳಿದರು.

ಭಾರತದ ಮುನ್ನಡೆಯಲ್ಲಿ ಕೇವಲ ಸರ್ಕಾರ ಅಷ್ಟೇ ಕೆಲಸ ಮಾಡಿದರೆ ಸಾಲದು ಜನರೂ ಕೂಡ ಎಲ್ಲ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಕಡಾಡಿ ಹೇಳಿದರು.

ಧ್ವಜಾರೋಹಣ ನೆರವೇರಿಸಿದ ಮೂಡಲಗಿ ತಹಸೀಲ್ದಾರ ಡಿ ಜೆ ಮಹಾತ್ ಅವರು ಸಂದೇಶ ವಾಚನ ಮಾಡಿ, ಎಲ್ಲಿಯವರೆಗೆ ವ್ಯಕ್ತಿಗೆ ಸ್ವಾತಂತ್ರ್ಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿ ಸಾಮಾಜಿಕ, ಆರ್ಥಿಕ ಹಿನ್ನಡೆ ಉಂಟಾಗಿದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹನೀಯರು ಹಾಗೂ ಇಂದು ಕೊರೋನಾ ವಿರುದ್ಧ ಹೋರಾಡಿದ ವಾರಿಯರ್ಸ್ ಗಳ ಕಾರ್ಯ ಅಭಿನಂದನೀಯ ಎಂದರು.

ಎಸ್ಎಸ್ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಲಾಯಿತು

ಈ ಸಂದರ್ಭದಲ್ಲಿ ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ ಖಿದ್ಮತ್ ವೆಲ್ ಫೇರ್ ಸಂಘದ ಕಾರ್ಯಕರ್ತರಿಗೆ ಸತ್ಕಾರ ನೀಡಲಾಯಿತು.

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಎಸ ಆರ್ ಸೋನವಾಲಕರ ಅವರಿಂದ ಕೊಡಮಾಡಿದ ಎರಡು ಲಕ್ಷ ರೂ.ಗಳ ಕಾಣಿಕೆಯನ್ನು ಪ್ರದಾನ ಮಾಡಿ ಸತ್ಕರಿಸಲಾಯಿತು.

ಮಾಜಿ ಪುರಸಭಾ ಅಧ್ಯಕ್ಷ ಎಸ್ ಆರ್ ಸೋನವಾಲಕರ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಾಣ ಕೊಟ್ಟ ಅನೇಕ ಮಹನೀಯರನ್ನು ಇಂದು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪುರಸಭೆಯಿಂದ ಸತ್ಕಾರ ಮಾಡಲಾಯಿತು

ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹಾಗೂ ಬಿಇಓ ಅಜಿತ್ ಮೆನ್ನಿಕೇರಿ ಮಾತನಾಡಿದರು.

ಸಮಾರಂಭದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವೈ ಎಮ್ ಗುಜನಟ್ಟಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮುಖ್ಯ ಆರೋಗ್ಯಾಧಿಕಾರಿ ಡಾ. ಭಾರತಿ ಕೋಣಿ, ಸಿ ಪಿಐ ವೆಂಕಟೇಶ ಮುರನಾಳ, ಮುಖ್ಯಾಧಿಕಾರಿ ದೀಪಕ ಹರ್ದಿ, ತಾಲೂಕಾ ಪಂಚಾಯತ ನಿರ್ವಹಣಾಧಿಕಾರಿ ಸಂದೀಪ ಚೌಗಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ ಸ್ವಾಗತಿಸಿದರು. ಕರಿಬಸವರಾಜು ಕಾರ್ಯಕ್ರಮ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group