Homeಸುದ್ದಿಗಳುಕಸ ವಿಂಗಡಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಕಸ ವಿಂಗಡಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಮೂಡಲಗಿ: ತಾಲೂಕಿನ ಕಲ್ಲೋಳಿ  ವಲಯದ ಗುಜನಟ್ಟಿ  ಕಾರ್ಯಕ್ಷೇತ್ರದಲ್ಲಿ ಈ ದಿನ ಜ್ಞಾನ ಜ್ಯೋತಿ   ಜ್ಞಾನವಿಕಾಸ ಕೇಂದ್ರ ದಲ್ಲಿ  ಸೃಜನಶೀಲ  ಕಾರ್ಯಕ್ರಮದಡಿಯಲ್ಲಿ  ಹಸಿ ಕಸ ಹಾಗೂ ಒಣ ಕಸ ವಿಂಗಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ ಇವರು ಪ್ರಾಸ್ತಾವಿಕ ನುಡಿಯಲ್ಲಿ ಹಸಿ ಕಸ ಹಾಗೂ ಒಣ ಕಸ  ವಿಂಗಡನೆಯ ಮಹತ್ವ ಹಾಗೂ ಶೌಚಾಲಯ  ಬಳಕೆ ಬಗ್ಗೆ  ಮಾಹಿತಿ ನೀಡಿ ಸದಸ್ಯರಿಗೆ ಹಸಿ ಕಸ ಮತ್ತು ಒಣ ಕಸ ಹೇಗೆ ವಿಂಗಡನೆ ಮಾಡಬೇಕು ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರ್ಥಪೂರ್ಣವಾಗಿ ಮಾಹಿತಿ ನೀಡಿದರು. 

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ನಾಗನೂರ ಪಟ್ಟಣ ಪಂಚಾಯಿತಿಯ  ಫಸ್ಟ್ ಡಿವಿಜನ್ ಅಸಿಸ್ಟೆಂಟ್  ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ವಿದ್ಯಾ ರೆಡ್ಡಿ ಅವರು  ಪಂಚಾಯಿತಿ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಿ ಪ್ರತಿಯೊಬ್ಬರ ಮನೆಗೂ ಪಂಚಾಯಿತಿ ವತಿಯಿಂದ ನೀಡಿದ ದಸ್ಟ್ ಬಿನ್ ಗಳ ಉಪಯೋಗ ಮಾಡಿ ಹಸಿಕಸ ಹಾಗೂ ಒಣಕಸದಿಂದ ಆಗುವ ಗೊಬ್ಬರ ತಯಾರಿಕೆ ಮಾಡುವ ಬಗ್ಗೆ ತಿಳಿಸಿದರು.

ನಾಗನೂರು ಪಟ್ಟಣ ಪಂಚಾಯಿತಿಯ ಜೂನಿಯರ್ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜಶೇಖರ್ ಹಡಿಗಿನಾಳ ಅವರು ಪ್ಲಾಸ್ಟಿಕ್ ನಿಷೇಧ ಬಗ್ಗೆ ಮಾಹಿತಿ ನೀಡಿ, ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಸಿಗುವ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ನೀಡಿ ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆ, ಅದರಿಂದ ಬರುವ ಕ್ಯಾನ್ಸರ್ ರೋಗದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. 

ಈ ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯದ ರಾಜು ನಾಯಕ, ಮೂಡಲಗಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಶ್ರದ್ಧಾ  ಕಮ್ಮಾರ, ಸೇವಾ ಪ್ರತಿನಿಧಿಗಳು ಕವಿತಾ ಮಲ್ಲಮ್ಮ ಹಾಗೂ ಕೇಂದ್ರದ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group