ಬೆಳಗಾವಿ – ಚುಟುಕುಗಳು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತೆ ಇರಬೇಕು ಸರಳ ಬರಹ ಜನರನ್ನು ಬಹುಬೇಗ ತಲುಪುತ್ತದೆ ಹೀಗಾಗಿ ಚುಟುಕು ಸಾಹಿತ್ಯ ಇಂದು ಬಹಳಷ್ಟು ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ಎಲ್ ಎಸ್ ಶಾಸ್ತ್ರಿ ಯವರು ಖಾನಾಪುರ ತಾಲೂಕ ಘಟಕದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು
ಚುಟುಕು ಸಾಹಿತ್ಯ ಸಾಮಾನ್ಯವಾಗಿ ಎಲ್ಲರ ಮಾತುಗಳಲ್ಲಿ ಹುದಗಿರುವಂತದ್ದು ಅವುಗಳನ್ನು ವ್ಯಕ್ತಿಯೇ ಸಂದರ್ಭದಲ್ಲಿ ತಕ್ಕ ಹಾಗೆ ಹೊರಗೆ ಹಾಕುತ್ತಾನೆ ಆ ಜಾಣ್ಮೆಯನ್ನು ಅರಿತವನೇ ಚುಟುಕು ಬರೆಯುತ್ತಾನೆ ಎಂದು ಉದ್ಘಾಟನೆಗಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್ ಆರ್ ಹತ್ತಿ ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಸಿ ಕೆ ಜೋರಾಪೂರ್ ಅವರು ಮಾತನಾಡುತ್ತಾ ಸಾಹಿತ್ಯ ಮನುಷ್ಯನ ಮನಸ್ಸನ್ನು ತಲುಪುವಂತೆ ಅದನ್ನು ನಾವು ಸವಿಯಬೇಕು ಎಂದು ಖಾನಾಪುರ ಪರಿಸರವನ್ನು ಬಹಳಷ್ಟು ಕೊಂಡಾಡಿದರು ಅತಿಥಿಗಳಾಗಿ ಮಕ್ಕಳ ಕಥೆಗಾರರಾದ ಬಸವರಾಜ ಗಾರ್ಗಿ
ಡಾ. ರಾಜನಂದ ಗಾರ್ಗಿ
ಡಾ. ಅನ್ನಪೂರ್ಣ ಹಿರೇಮಠ ಅಧ್ಯಕ್ಷತೆಯನ್ನು ಎಲ್.ಎಸ್.ಶಾಸ್ತ್ರಿಯವರು ವಹಿಸಿಕೊಂಡು ಚುಟುಕುಗಳು ಹಾಸ್ಯಮಯವಾಗಿಯೂ ಗಂಭೀರತೆಯಿಂದಲೂ ಬಂಡಾಯದ ಧ್ವನಿಗಳಾಗಿಯೂ ನೀತಿ ಪಾಠಗಳಾಗಿಯೂ ಇರಬೇಕು ಎಂದರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ
ಡಾ. ಡಿ ಎಂ ಜವಳ್ಕರ್ ಅವರು ಉದ್ಘಾಟನಾ ಸಮಾರಂಭವನ್ನು ಸಂಯೋಜಿಸಿದ್ದರು ಚುಟುಕು ವಾಚನಗಳನ್ನು ವಿಜಯ್ ಪೂಜಾರ್ ಕಲ್ಲಪ್ಪ ಕರ್ಕಿ ಮಹಾಲಿಂಗ ಬಡಿಗೇರ್ ರಾಕೇಶ್ ಜಳಕಿ ಅಂಬರೀಶ್ ರೇವತ್ಗಾವ್ ಶ್ರೀಮತಿ ಅಶ್ವಿನಿ ಹಿರೇಮಠ್ ಮುಂತಾದವರು ವಾಚಿಸಿದರು ತಾಲೂಕ ಘಟಕದ ಗೌರವ ಅಧ್ಯಕ್ಷರಾದ ಜಗದೀಶ್ ಹೊಸಮನಿ ಅಧ್ಯಕ್ಷರಾದ ಶಿವಾನಂದ್ ಹುಕ್ಕೇರಿ ವೇದಿಕೆಯನ್ನು ಅಲಂಕರಿಸಿದ್ದರು ಸಮಾರಂಭದ ನಿರೂಪಣೆ ಯನ್ನು ಕನ್ನಡ ಉಪನ್ಯಾಸಕರಾದ ಡಾ. ಅ. ಬ. ಇಟಗಿ ನಡೆಸಿದರು ಪ್ರಾರ್ಥನೆಯನ್ನು ಕುಮಾರಿ ಜೋಶ್ನಾ ಪಾರ್ಶೇಖರ್ ವಿದ್ಯಾರ್ಥಿನಿಯರ ತಂಡ ಸಲ್ಲಿಸಿದರು ವಿಜಯ್ ಪೂಜಾರಿ ಅವರು ಸ್ವಾಗತ ಮಾಡಿಕೊಂಡರು ಮಹಾಲಿಂಗ ಬಡಿಗೇರವರು ವಂದನೆಗಳನ್ನು ಸಲ್ಲಿಸಿದರು ಕಾರ್ಯಕ್ರಮದಲ್ಲಿ ತಾಲೂಕಿನ ಕನ್ನಡ ಅಭಿಮಾನಿಗಳು ಹೋರಾಟಗಾರರು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು