ಮೂಡಲಗಿ : ಪೆಬ್ರುವರಿ ತಿಂಗಳಲ್ಲಿ ರಾಯಚೂರ ಜಿಲ್ಲೆಯ ನವಲೆಯಲ್ಲಿ ಜೀರ್ಣೋದ್ಧಾರಗೊಂಡ ಜಡೆಶಂಕರಲಿಂಗ ನೂತನ ದೇವಸ್ಥಾನ ಲೋಕಾರ್ಪಣೆಗೆ ಮೂಡಲಗಿ ಬಣಗಾರ ಸಮಾಜದವರನ್ನು ಆಹ್ವಾನಿಸಲು ಆಗಮಿಸಿದ್ದ ಹುಬ್ಬಳಿಯ ಬಣಗಾರ ಸಮಾಜದ ಮುಖಂಡರಾದ ಅನೀಲ್ ಕವಿಶೆಟ್ಟಿ, ಸುರೇಶ ಚನ್ನಿ ಹಾಗೂ ಮಲ್ಲಿಕಾರ್ಜುನ ಸಿರಗಣ್ಣವರ ಅವರನ್ನು ಸಮಾಜದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿದ ಹುಬ್ಬಳ್ಳಿಯ ಬಣಗಾರ ಸಮಾಜದ ಮುಖಂಡ ಅನೀಲ್ ಕವಿಶೆಟ್ಟಿ ಮಾತನಾಡಿ, ರಾಯಚೂರ ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನವಿಲೆ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ನಮ್ಮ ನಿಮ್ಮೆಲ್ಲರ ಕುಲದೇವರಾದ ನವಲೆ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನವು, ಬಸವಸಾಗರ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿ ನಾವೆಲ್ಲ ದೇವರ ದರ್ಶನದಿಂದ ವಂಚಿತರಾಗಿದ್ದೆವು. ಕಳೆದ 20 ವರ್ಷಗಳ ಕಠಿಣ ಪರಿಶ್ರಮದಿಂದ ಈಗ ದೇವಸ್ಥಾನವು ಪುನರ್ನಿರ್ಮಾಣವಾಗಿ, ಲೋಕಾರ್ಪಣೆಗೆ ಸಿದ್ಧವಾಗಿದೆ. ಇದಕ್ಕೆಲ್ಲಾ ನಮ್ಮೆಲ್ಲರ ಪ್ರಯತ್ನ, ಸರಕಾರದ ಸಹಕಾರ,ಅಧಿಕಾರಿಗಳ ಹಾಗೂ ಚುನಾಯಿತ ಜನಪ್ರತಿನಿಧಿಗಳ ಕೊಡುಗೆಯನ್ನು ಮರೆಯಲಾಗದು. ಪುನರ್ನಿರ್ಮಾಣಗೊಂಡ ಭವ್ಯವಾದ ದೇವಸ್ಥಾನವನ್ನು ಸಮಾಜಕ್ಕೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಬರುವ ಜನವರಿ/ಫೆಬ್ರುವರಿ 2024 ರಲ್ಲಿ ನೆರವೇರಿಸಬೇಕಾಗಿದೆ. ಇದೊಂದು ಬಣಗಾರ ಸಮಾಜದ ಹೆಮ್ಮೆಯ ಪ್ರತೀಕವಾಗಿದ್ದು, ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿ ಎಲ್ಲರಿಗೂ ಮಾದರಿಯಾಗಬೇಕಾಗಿದೆ ಎಂದರು.
ಈ ಸಮಯದಲ್ಲಿ ಮೂಡಲಗಿ ಬಣಗಾರ ಸಮಾಜದ ಅಧ್ಯಕ್ಷ ಆನಂದ ಮಿರ್ಜಿ, ಉಪಾಧ್ಯಕ್ಷ ಅರುಣ ಬಣಗಾರ, ಕಾರ್ಯದರ್ಶಿ ಶಿವಾನಂದ ಮುಧೋಳ,
ಖಜಾಂಚಿ ದಯಾನಂದ ಮಟ್ಟಿಕಲ್ಲಿ, ಬಸವರಾಜ ಕಬ್ಬೂರ, ಬಸವರಾಜ ಗುಣಕಿ, ಚಿದಾನಂದ ಅಲತಗಿ, ದಾನಪ್ಪ ಗುಣಕಿ, ಮಧುಗಿರೀಶ ಕರಡಿ ಮತ್ತಿತರರು ಉಪಸ್ಥಿತರಿದ್ದರು.