spot_img
spot_img

ಕವನ: ಸ್ವಾತಂತ್ರ್ಯ

Must Read

- Advertisement -

ಸ್ವಾತಂತ್ರ್ಯ

ಯಾರಿಗಿದೆ?ಎಲ್ಲಿದೆ? ಸ್ವಾತಂತ್ರ್ಯ
ಇರುವುದೆಲ್ಲವೂ ನಮಗೆ ಪಾರತಂತ್ರ್ಯ
ಬದುಕು ಕಟ್ಟಬೇಕು ನಾವು ನಮ್ಮಗಳ
ಮೇಲೆ ಸ್ವಾತಂತ್ರ್ಯದ ವಿಜಯದ ಮೇಲೆ

ಸ್ವಾತಂತ್ರ್ಯವಿರುವುದು ಪೋಲಿಸರ
ಗುಂಡು ಲಾಠಿಗಳಲಿ ವಂಚಕರ ಕೈಗಳಲಿ
ಬಡವನ ಕಣ್ಣೀರು ಒರೆಸದ ಸಾಲದ
ಶೂಲದಲಿ ಹರಿದ ತಿನ್ನುವ ಮೃಗಗಳಲಿ

ರೈತನ ಶರಣಾಗತಿಯ ನೇಣು ಹಗ್ಗದಲಿ
ಬಿಗಿದ ಕುತ್ತಿಗೆಯಲಿ ಸ್ವಾತಂತ್ರ್ಯ ಬಂತು
ನಿತ್ಯ ನಿರಂತರ ಗುಂಡಿಗೆ ಎದೆಯೊಡ್ಡುವ
ವೀರ ಯೋಧರ ಕಫನಿನಲಿ ಬಂತು ಸ್ವಾತಂತ್ರ್ಯ

- Advertisement -

ತುಂಡುಡುಗೆಯನುಟ್ಟು ಕಂಡ ಕಂಡವರ
ದಾಹಕ್ಕೆ ಆಸರೆಯಾಗಿ ನೀರೆರೆಯುವ
ರಕ್ತ ದೇಹಿಗಳ ಕಾಮುಕರ ಕಣ್ಣಲ್ಲಿ
ಬಂತು ವಿಕೃತ ಮನದ ಸ್ವಾತಂತ್ರ್ಯ

ಹಿಡಿಯುಂಡು ಖಂಡುಗ ಕೊಟ್ಟವರು
ಗೋರಿಯಾದರು ಖಂಡುಗವನುಂಡು
ಹಿಡಿಕೊಟ್ಟವರು ದಾನಿಗಳಾದರು
ಎಲ್ಲಿಗೆ ಬಂತು ಈ ಸ್ವಾತಂತ್ರ್ಯ

ಬದುಕಿನ ಆಶಾ ಗೋಪುರ ಕಳಚಿ
ಬೀಳುವ ಮುನ್ನ ನನ್ನೆದೆಯಾಳದಲಿ
ಬಿಕ್ಕಿ ಬಿಕ್ಕಿ ಅತ್ತ ಕಣ್ಣೀರು ಕೋಡಿಯಾಗಿ
ಹರಿದು ಹೃದಯ ಸಾಗರ ಸೇರಿತು

- Advertisement -

ಯಾರಿಗೆ ಬೇಕಿತ್ತು ಈ ಸ್ವಾತಂತ್ರ್ಯ
ಕಿತ್ತು ತಿನ್ನುವ ರಣಹದ್ದುಗಳೇ
ಮತ್ತೆ ಬರುವೆವು ನಾವು ನಮ್ಮ
ನವ ಬದುಕ ಕಟ್ಟಿಕೊಂಡು
ನವ ಕನಸು ಕಟ್ಟಿಕೊಂಡು

ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group