ಕವನ: ಸಂಕ್ರಮಣ

Must Read

ಸಂಕ್ರಮಣ

ನಾಡಿನೆಲ್ಲೆಡೆ ಹಬ್ಬದ ಸಡಗರ ಈ ಮಕರ
ಸಂಕ್ರಮಣ
ನದಿಯಲ್ಲಿ ಮಾಡಿ ಪ್ರಾತಃಕಾಲ
ಪುಣ್ಯ ಸ್ನಾನ
ಒಂದಾಗಿ ಬೆಸೆಯುತ್ತಿದೆ ಎಲ್ಲ ಹೃದಯಗಳ
ಮಿಲನ
ನಾಡಿನ ರೈತರಿಗೆಲ್ಲ ಸುಗ್ಗಿಯ- ಹಿಗ್ಗಿನ
ಕಣ
ಸೂರ್ಯ ತನ್ನ ಪರಿಭ್ರಮಣ ಬದಲಿಸುವ
ಕ್ಷಣ
ಸವಿಯಬೇಕು ಪ್ರತಿಯೊಬ್ಬರು
ಸಿಹಿ ಎಳ್ಳು ಬೆಲ್ಲಗಳ ಮಿಶ್ರಣ
ನಿಮ್ಮ ಕುಟುಂಬದವರ ಜೊತೆ
ಸಂಭ್ರಮಿಸಿ ಈ ದಿನ
ಅಳಿಸಿಹಾಕಿ ಹೃದಯದಲ್ಲಿರುವ
ಕಲ್ಮಶಗಳನ್ನ
ಹೊಸ ವರ್ಷಕೆ ಮಾಡಿ ಸಾಧನೆಯ
ಸಂಕಲ್ಪವನ್ನ
ನಿತ್ಯ ಕುಡಿಯಿರಿ ತಾಳ್ಮೆಯ
ಅಮೃತವನ್ನ
ಗೌರವಿಸಬೇಕು ಎಲ್ಲ ಗುರು
ಹಿರಿಯರನ್ನ
ಸಂಕ್ರಮಣ ಶುಭಾಶಯಗಳೂಂದಿಗೆ
ಈ ನಿಮ್ಮ ಕಿರಣ


ಕಿರಣ ಯಲಿಗಾರ
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group