ಕವನ: ಭವಿಷ್ಯದ ಆಶಾಕಿರಣಗಳಾಗಿ…

Must Read

ಭವಿಷ್ಯದ ಆಶಾಕಿರಣಗಳಾಗಿ…

ವಿಶ್ವದ ಭವಿಷ್ಯ ರೂಪಿಸುವ

ಆಶಾಕಿರಣಗಳು ನೀವು ,
ಸಾಹಿತ್ಯ, ಸಂಗೀತ,ಕ್ರೀಡೆ,
ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕೆ ಗಟ್ಟಿಬೇರುಗಳು ನೀವು ,
ಸಮಾಜದ ಅಭ್ಯುದಯಕೆ ಪಥಿಕರು ನೀವು ,
ಏಕೆ ಈ ತಲ್ಲಣ,ಆತಂಕ..ಓ ಯುವ ಬಾಂಧವರೆ..,??

‘ಆನೆ ನಡೆದದ್ದೇ ಹಾದಿ ‘ ಎಂಬಂತೆ,
ನಿಮ್ಮ ನಡೆಯೇ ನಿಮ್ಮ ಪ್ರಗತಿಗೆ ದಾರಿದೀಪ…
ಏಕೆ ನಿರಾಸೆ,ನಿಟ್ಟುಸಿರು…
ಜಗವು ನಿಮ್ಮ ಮೇಲೆ ವಿಶ್ವಾಸವಿಟ್ಟಿದೆ…
‘ಏಳಿ ಎದ್ದೇಳಿ,ಗುರಿಮುಟ್ಟುವವರೆಗೂ ನಿಲ್ಲದಿರಿ ‘
ಸ್ವಾಮಿ ವಿವೇಕಾನಂದರ ವಾಣಿ
ನಿಮ್ಮನು ಜಾಗೃತಿಗೊಳಿಸಲಿ…

ಕ್ರೀಡೆ,ಸಂಗೀತ,ಸಾಹಿತ್ಯ, ವಿಜ್ಞಾನಗಳತ್ತ
ನೀವು ಬೆನ್ನು ತಿರುಗಿಸಿದ್ದೇಕೆ ?
ಗುಂಪು ಕಟ್ಟಿ ದುಶ್ಚಟಗಳ ದಾಸರಾಗಿದ್ದೇಕೆ ?
ಓದುವ ದಿನಗಳಲಿ ಆಸಕ್ತಿ ತೋರಿ,
ಮರುಭೂಮಿಯು‌ ಮಳೆ ನೀರ ಗುಟುಕಿಸಿಕೊಳ್ಳುವ ತೆರದಿ,
ವಿದ್ಯೆ ಯ ಒಪ್ಪಿಕೊಳ್ಳಲು ನಿಮಗೇನು ತೊಂದರೆ ??

ಕೃಷಿ, ಹೈನುಗಾರಿಕೆ, ತೋಟಗಾರಿಕೆಗಳಲಿ
ನವೀನ ಕೃಷಿ ಪದ್ದತಿಯ ಅಳವಡಿಸಿ
ಜೀವನದಲಿ ಯಶ ಕಂಡ ನೂರಾರು ಯುವ ಸಾಧಕರುಂಟು…
ಅವರಂತೆ ಬದುಕಲು ನಿಮಗೇನು ತೊಂದರೆ ???

ರಾಷ್ಟ್ರ ಕಾಯುವ ನೂರಾರು ಯುವ ಸೈನಿಕರು ,
ಕಾನೂನು‌ರಕ್ಷಿಸುವ ಯುವ ಆರಕ್ಷಕರು,
ಭವಿಷ್ಯದ ಸಮಾಜ ರೂಪಿಸುವ ಶಿಕ್ಷಕರು,
ಜನರ ಪ್ರಾಣ ಉಳಿಸುವ ವೈಧ್ಯರು, ವಿಜ್ಞಾನಿಗಳು
ನಿಮಗೆ ಏಕಾಗಬಾರದು ಮಾದರಿ ????

ಸಮಾಜದ ಹುಳುಕು ತೋರುವ ಪತ್ರಕರ್ತರು ,
ಜನರ ಅಭ್ಯುದಯಕೆ ದುಡಿವ ಸಮಾಜಸೇವಕರು ,
ಕೃಷಿಗೆ ಮಾರ್ಗದರ್ಶನ ನೀಡುವ ತಜ್ಞರು..
ನೀವೇಕಾಗಬಾರದು ? ಜನರ ಪ್ರಗತಿಗೆ ನೀವೇಕೆ ದುಡಿಯಬಾರದು ???

ದುಶ್ಚಟಗಳ ಸಹವಾಸ ಬಿಟ್ಟುಬಿಡಿ ,
ಜಾತಿ-ಧರ್ಮ-ಪಂಥಗಳ ಕಿತ್ತೆಸೆದು ಬಿಡಿ ,
ನಿಮ್ಮೂರ ಹಳ್ಳ-ತೊರೆ-ಪರಿಸರಗಳ ಉಳಿಸಿಬಿಡಿ ,.
ನಿಮ್ಮ ವೃತ್ತಿ ಯಾವುದಿರಲಿ..ಕ್ಷೇತ್ರ ಯಾವುದಿರಲಿ..
ಸಮಾಜದ ಅಭ್ಯುದಯಕೆ ನಾಂದಿ ಹಾಡಿಬಿಡಿ…


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group