ಲೇಖಿಕ ಸಾಹಿತ್ಯ ವೇದಿಕೆ ರಜತ ಸಂಭ್ರಮ ; ಕವಿಗೋಷ್ಠಿ, ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ

Must Read

ಲೇಖಕಿಯರು ಕಥೆ ಕವನ ಕಾದಂಬರಿಗಳ ಜೊತೆಯಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ಕೂಡಾ ತೊಡಗಿಸಿಕೊಳ್ಳಬೇಕು. ಎಲ್ಲಾ ಬರಹಗಳು ವಿಮರ್ಶೆಯ ಮಾನದಂಡಕ್ಕೆ ಒಳಪಡಬೇಕು ಎಂದು ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ರಜತ ಸಂಭ್ರಮ ಅಂಗವಾಗಿ ಹಾಸನದ ಎ.ವಿ.ಕೆ.ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೇಖಿಕ ಸಾಹಿತ್ಯ  ವೇದಿಕೆಯ ಸಂಸ್ಥಾಪಕರು ಲೇಖಕಿ ಶೈಲಜಾ ಸುರೇಶ್ ಮಾತನಾಡಿ ಲೇಖಿಕ ಸಾಹಿತ್ಯ ವೇದಿಕೆಗೆ ೨೫ ವರ್ಷ ತುಂಬಿ ಈ ಪ್ರಯುಕ್ತ ರಜತ ಮಹೋತ್ಸವ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಇದರ ಸಂಚಾಲಕಿಯಾಗಿ ನನಗೆ ನನ್ನ ಹುಟ್ಟಿದೂರಿನಲ್ಲಿ ನಡೆಯುತ್ತಿರುವುದು ಅತ್ಯಂತ ಸಾರ್ಥಕ್ಯ ಭಾವ ತಂದಿದೆ ಎಂದು ಭಾವುಕರಾಗಿ ನುಡಿದರು.

ಕವಿಗೋಷ್ಠಿಯಲ್ಲಿ ಬೆಂಗಳೂರಿನ ಸ್ವರ್ಣಗೌರಿ, ಹೇಮಾ ದೇಸಾಯಿ, ಶಾಂತಿ ವಾಸು, ಅಕ್ಷಯ ಮರಾಟೆ, ಅರುಣಾರಾವ್, ವಿಭಾ ಪುರೋಹಿತ್, ರತ್ನ ನಾಗರಾಜ್, ಸವಿತಾ ನಾಗೇಶ್, ರಾಣಿ ವಿ ಗೋವಿಂದರಾಜು, ದೀಪ ಜಿ.ಸುಬ್ರಹ್ಮಣ್ಯ, ಗಾಯತ್ರಿ ಬಿ.ಜಿ.ಶಾಂತ ಜಯಾನಂದ, ಮೈಸೂರಿನ ಸುಜಾತ ರವೀಶ್, ಕೆ.ಟಿ.ವಾಣಿಸುಬ್ಬಯ್ಯ, ಮಡಿಕೇರಿಯ ಸಹನಾ ಕಾಂತಬೈಲು, ಕಾರ್ಕಳದ ಜ್ಯೋತಿ ಗುರುಪ್ರಸಾದ, ಗೋಕಾಕದ ಪುಷ್ಟಾ ಮುರುಗೋಡ, ಹಾಸನದ ಡಾ. ಶಾಂತಾ ಅತ್ನಿ, ಪರಮೇಶ ಮಡಬಲು, ವನಜಾ ಸುರೇಶ, ಸುಳ್ಯದ ಡಾ. ವೀಣಾ ಭಾಗವಹಿಸಿದ್ದರು.

ಭಾಗವಹಿಸಿದ್ದ ಎಲ್ಲಾ ಕವಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು, ಹಾರ ಮತ್ತು ಪುಸ್ತಕ ಗೌರವ ನೀಡಲಾಯಿತು. ಬೆಳಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ೨೫ ಸಾಹಿತ್ಯ ಕ್ಷೇತ್ರದ ಸಾಧಕರಿಗೆ   ಲೇಖಿಕಾ ಶ್ರೀ ೨೦೨೫ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ  ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ, ಕೆ.ಎಂ.ಲೋಲಾಕ್ಷಿ, ಪದ್ಮಾ ಆನಂದ್, ಉಷಾ ನರಸಿಂಹನ್, ಬೆಂಗಳೂರಿನ ನಾಗವೇಣಿ ರಂಗನ್, ಮುಕುಂದ ಗಂಗೂರ್, ಯಶೋದಾ ಡಿ. ರಾಧಾ ಟೇಕಲ್, ಬೆಳಗಾವಿಯ ಮಧುರಾ ರ‍್ಣಂ, ದೀಪಿಕಾ ಚಾಟೆ, ಚಿಕ್ಕಮಗಳೂರಿನ ನಾಗಲಕ್ಷ್ಮಿ ಎಂ.ಜೆ., ಉತ್ತರ ಕನ್ನಡದ ಭಾಗೀರಥಿ  ಹೆಗಡೆ, ಡಾ. ವೀಣಾ ಸುಳ್ಯ, ಕೃಷ್ಣ ಪದಕಿ ಸನ್ಮಾನ ಸ್ವೀಕರಿಸಿದರು.

ಸಂಸ್ಥೆಯು ನಡೆಸಿದ ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಫರ್ಧೆ ವಿಜೇತರಾದ ವಿದ್ಯಾಶಿರಹಟ್ಟಿ ಪ್ರಥಮ, ಎಸ್.ರಘುನಂದನ್ ದ್ವಿತೀಯ, ಡಾ. ಇಂದಿರಾ ದೊಡ್ಡಬಳ್ಳಾಪುರ ತೃತೀಯ ಮತ್ತು ಜ್ಯೋತಿ ಗುರುಪ್ರಸಾದ ಕಾರ್ಕಳ ಮೆಚ್ಚುಗೆ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸೀ.ಚ. ಯತೀಶ್ವರ, ಸಂಚಾಲಕಿ ಶೈಲಜಾ ಸುರೇಶ, ಪತ್ರಕರ‍್ತರು ವೆಂಕಟೇಶ, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ, ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದ ಡಾ. ಇಂದಿರಾ ಮತ್ತು ನಾಗವೇಣಿ ರಮನಗನ್ ತಂಡದವರಿಂದ ಕಿರುನಾಟಕ ಮತ್ತು ವಿದ್ಯಾ ಶಿರಹಟ್ಟಿ ತಂಡದವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group